ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹೊರ ಗುತ್ತಿಗೆ ನೌಕರಿಯು ಶೋಷಣೆಯ ಮಾರ್ಗ ಹಿಡಿದಿದೆ ಎಂಬ ಆರೋಪಗಳಿವೆ. ಹಲವು ಸಂಸ್ಥೆಗಳು, ಏಜೆನ್ಸಿಗಳು ಕಾರ್ಮಿಕರ ಭವಿಷ್ಯ ನಿಧಿ (ಪಿ.ಎಫ್), ಕಾರ್ಮಿಕರ ವಿಮೆ (ಇ.ಎಸ್.ಐ) ಪಾವತಿಸುತ್ತಿಲ್ಲ, ವೇತನ ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುತ್ತಾರೆ ಎಂಬ ದೂರುಗಳಿವೆ. ಲಗಾಮು ಇಲ್ಲದ ಕುದುರೆಯಂತೆ ಈ ವಲಯ ಸಾಗುತ್ತಿದೆ. ಹಾಗಾಗಿ ಅದರ ನಿಯಂತ್ರಣಕ್ಕೆ ನಮ್ಮ ಇಲಾಖೆ ಮುಂದಾಗಿದೆ’ ಎಂದು ಅವರು ಹೇಳಿದರು.