<p><strong>ಕಾರವಾರ: </strong>ನಗರದ ‘ಪಹರೆ ವೇದಿಕೆ’ಯು ಶನಿವಾರ ಆರು ವರ್ಷಗಳನ್ನು ಪೂರೈಸಿತು. ಈ ಸಂದರ್ಭದಲ್ಲಿ ನಗರದ ಕಾಳಿ ನದಿ ಸಂಗಮದಲ್ಲಿ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.</p>.<p>ಸ್ವಚ್ಛತಾ ಕಾರ್ಯಕ್ರಮಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಚಲನಚಿತ್ರ ನಟ ಅರುಣ್ ಸಾಗರ್ ಈ ಬಾರಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಪೊಟ್ಟಣಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿದರು.</p>.<p>ಅರುಣ್ ಸಾಗರ್, ‘ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಭವ ಎಂಬುದಕ್ಕಿಂತ ಅನುಭಾವವಾಗುತ್ತದೆ. ಪಹರೆ ವೇದಿಕೆಯವರು ನಗರದ ಸ್ವಚ್ಛತೆಗಾಗಿ ಪಕ್ಷ, ವರ್ಗ, ವಯಸ್ಸಿನ ಭೇದ ಮರೆತು ಶ್ರಮಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆಗೆ ಹೂಗುಚ್ಛ ಇಟ್ಟಿದ್ದಾರೆ. ಪ್ರವಾಸಿ ತಾಣವಾಗಿರುವ ಕಾರವಾರಕ್ಕೆ ಬಂದವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ ಎಸೆಯುತ್ತಾರೆ. ಅವುಗಳ ಸ್ವಚ್ಛತೆಗೆ ವೇದಿಕೆ ಪರಿಶ್ರಮ ಪಡುವುದು ಬಹಳ ಸಂತೋಷದ ಕಾರ್ಯ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ಕಾರವಾರವನ್ನು ರವೀಂದ್ರನಾಥ ಟ್ಯಾಗೋರ್ ಕರ್ನಾಟಕದ ಕಾಶ್ಮೀರ ಎಂದು ಹೊಗಳಿದ್ದರು. ಇಲ್ಲಿನ ಕಾಳಿ ನದಿ ಸಂಗಮಕ್ಕೆ ಉತ್ತಮ ಹೆಸರಿದೆ. ಅದನ್ನು ಉಳಿಸುವ ಕಾರ್ಯವನ್ನು ಪಹರೆಯವರು ಮಾದರಿಯಾಗಿ ಮಾಡುತ್ತಿದ್ದಾರೆ. ನನಗೂ ಇದೊಂದು ಪಾಠವಾಗಿದ್ದು, ನಾನೂ ಮುಂದುವರಿಸುತ್ತೇವೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಆರಂಭವಾದ ಶ್ರಮದಾನವು ಮೂರು ತಾಸು ನಡೆಯಿತು. ಒಂದು ಲಾರಿ ಲೋಡ್ನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.</p>.<p>ಸಂಜೆ ಮಯೂರವರ್ಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಕವಿತಾ ಮಿಶ್ರಾ, ಅರುಣ್ ಸಾಗರ್ ಭಾಗವಹಿಸಿದ್ದರು. ‘ಪಹರೆ’ ವೇದಿಕೆಯು ನಗರದ ವಿವಿಧೆಡೆ ಪ್ರತಿ ವಾರ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ನಗರದ ಗಣ್ಯರು, ಜನಸಾಮಾನ್ಯರು ಇದರಲ್ಲಿ ಭಾಗವಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ನಗರದ ‘ಪಹರೆ ವೇದಿಕೆ’ಯು ಶನಿವಾರ ಆರು ವರ್ಷಗಳನ್ನು ಪೂರೈಸಿತು. ಈ ಸಂದರ್ಭದಲ್ಲಿ ನಗರದ ಕಾಳಿ ನದಿ ಸಂಗಮದಲ್ಲಿ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.</p>.<p>ಸ್ವಚ್ಛತಾ ಕಾರ್ಯಕ್ರಮಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಚಲನಚಿತ್ರ ನಟ ಅರುಣ್ ಸಾಗರ್ ಈ ಬಾರಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಪೊಟ್ಟಣಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿದರು.</p>.<p>ಅರುಣ್ ಸಾಗರ್, ‘ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಭವ ಎಂಬುದಕ್ಕಿಂತ ಅನುಭಾವವಾಗುತ್ತದೆ. ಪಹರೆ ವೇದಿಕೆಯವರು ನಗರದ ಸ್ವಚ್ಛತೆಗಾಗಿ ಪಕ್ಷ, ವರ್ಗ, ವಯಸ್ಸಿನ ಭೇದ ಮರೆತು ಶ್ರಮಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆಗೆ ಹೂಗುಚ್ಛ ಇಟ್ಟಿದ್ದಾರೆ. ಪ್ರವಾಸಿ ತಾಣವಾಗಿರುವ ಕಾರವಾರಕ್ಕೆ ಬಂದವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ ಎಸೆಯುತ್ತಾರೆ. ಅವುಗಳ ಸ್ವಚ್ಛತೆಗೆ ವೇದಿಕೆ ಪರಿಶ್ರಮ ಪಡುವುದು ಬಹಳ ಸಂತೋಷದ ಕಾರ್ಯ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ಕಾರವಾರವನ್ನು ರವೀಂದ್ರನಾಥ ಟ್ಯಾಗೋರ್ ಕರ್ನಾಟಕದ ಕಾಶ್ಮೀರ ಎಂದು ಹೊಗಳಿದ್ದರು. ಇಲ್ಲಿನ ಕಾಳಿ ನದಿ ಸಂಗಮಕ್ಕೆ ಉತ್ತಮ ಹೆಸರಿದೆ. ಅದನ್ನು ಉಳಿಸುವ ಕಾರ್ಯವನ್ನು ಪಹರೆಯವರು ಮಾದರಿಯಾಗಿ ಮಾಡುತ್ತಿದ್ದಾರೆ. ನನಗೂ ಇದೊಂದು ಪಾಠವಾಗಿದ್ದು, ನಾನೂ ಮುಂದುವರಿಸುತ್ತೇವೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಆರಂಭವಾದ ಶ್ರಮದಾನವು ಮೂರು ತಾಸು ನಡೆಯಿತು. ಒಂದು ಲಾರಿ ಲೋಡ್ನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.</p>.<p>ಸಂಜೆ ಮಯೂರವರ್ಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಕವಿತಾ ಮಿಶ್ರಾ, ಅರುಣ್ ಸಾಗರ್ ಭಾಗವಹಿಸಿದ್ದರು. ‘ಪಹರೆ’ ವೇದಿಕೆಯು ನಗರದ ವಿವಿಧೆಡೆ ಪ್ರತಿ ವಾರ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ನಗರದ ಗಣ್ಯರು, ಜನಸಾಮಾನ್ಯರು ಇದರಲ್ಲಿ ಭಾಗವಹಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>