ಜುಲೈ 9ರಂದು ಸುರಿದ ಭಾರಿ ಮಳೆಯಿಂದ ನಾಟಿ ಮಾಡಿದ್ದ ಭತ್ತದ ಸಸಿಗಳೂಕೊಚ್ಚಿಕೊಂಡು ಹೋಗಿದ್ದವು. ಹಳ್ಳದಲ್ಲಿ ನೀರು ಉಕ್ಕಿ ಹರಿದು ಉಮರಗಡ್ಡೆ– ಸೀತೆಮಕ್ಕಿ ಸೇತುವೆಯ ಎರಡೂ ಕಡೆಯ ಪಿಚ್ಚಿಂಗ್ಗಳು ಕೊಚ್ಚಿಹೋದವು.ಎನ್.ಪಿ.ಸಿ.ಎಲ್ ಈ ಸೇತುವೆಯನ್ನು ನಿರ್ಮಿಸಿದ್ದು, ಕಾಮಗಾರಿ ಪರಿಪೂರ್ಣವಾಗುವ ಹಂತದಲ್ಲಿತ್ತು. ಮಳೆ ಒಂದುವೇಳೆ ಮತ್ತಷ್ಟು ಜೋರಾದರೆ ಸಂಪರ್ಕವೇ ಕಡಿತಗೊಳ್ಳುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿರಾಜೇಶ ಗೌಡ.