<p><strong>ಕಾರವಾರ:</strong> ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರ್ವೆ ಗ್ರಾಮದಲ್ಲಿಈಚೆಗೆಸುರಿದ ಭಾರಿ ಮಳೆಗೆ ಉಮರಗಡ್ಡೆ– ಸೀತೆಮಕ್ಕಿ ನಡುವೆ ನಿರ್ಮಿಸಲಾದನೂತನಸೇತುವೆಯ ಪಿಚ್ಚಿಂಗ್ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಗ್ರಾಮ ಪಂಚಾಯ್ತಿ ಕಚೇರಿಯಿಂದನಾಲ್ಕುಕಿಲೋಮೀಟರ್ ದೂರದಲ್ಲಿರುವ ಶಿರ್ವೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ಇತರ ಸಮಾಜದವರ 150ಮನೆಗಳಿವೆ.ಅಂದಾಜು 800ಜನರು ವಾಸಿಸುತ್ತಿದ್ದಾರೆ. ಕೃಷಿಯೇ ಜೀವನಕ್ಕೆ ಆಧಾರವಾಗಿರುವ ಅವರಿಗೆ ಅವಶ್ಯಕ ಸಾಮಗ್ರಿ ತರಲು, ಆರೋಗ್ಯ ತಪಾಸಣೆಗೆ ತೆರಳಲು ಈ ಸೇತುವೆ ಮೂಲಕವೇ ದೇವಳಮಕ್ಕಿಗೆಬರಬೇಕಾಗಿದೆ.</p>.<p>ಜುಲೈ 9ರಂದು ಸುರಿದ ಭಾರಿ ಮಳೆಯಿಂದ ನಾಟಿ ಮಾಡಿದ್ದ ಭತ್ತದ ಸಸಿಗಳೂಕೊಚ್ಚಿಕೊಂಡು ಹೋಗಿದ್ದವು. ಹಳ್ಳದಲ್ಲಿ ನೀರು ಉಕ್ಕಿ ಹರಿದು ಉಮರಗಡ್ಡೆ– ಸೀತೆಮಕ್ಕಿ ಸೇತುವೆಯ ಎರಡೂ ಕಡೆಯ ಪಿಚ್ಚಿಂಗ್ಗಳು ಕೊಚ್ಚಿಹೋದವು.ಎನ್.ಪಿ.ಸಿ.ಎಲ್ ಈ ಸೇತುವೆಯನ್ನು ನಿರ್ಮಿಸಿದ್ದು, ಕಾಮಗಾರಿ ಪರಿಪೂರ್ಣವಾಗುವ ಹಂತದಲ್ಲಿತ್ತು. ಮಳೆ ಒಂದುವೇಳೆ ಮತ್ತಷ್ಟು ಜೋರಾದರೆ ಸಂಪರ್ಕವೇ ಕಡಿತಗೊಳ್ಳುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿರಾಜೇಶ ಗೌಡ.</p>.<p>ಶಿರ್ವೆ ಗ್ರಾಮದರಿಗೆ ಸಂಪರ್ಕ ಕೊಂಡಿಯಾಗಿರುವಈಸೇತುವೆಯನ್ನು ಸಂಬಂಧ ಪಟ್ಟದವರು ಶೀಘ್ರವೇಸರಿಪಡಿಸಬೇಕು. ವಾಹನ ಸಂಚಾರಕ್ಕೆಯೋಗ್ಯವಾಗುವಂತೆ ಮಾಡಿಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕುಎಂದು ಯುವ ಮುಖಂಡಪ್ರಜ್ವಲ್ ಬಾಬುರಾಯ ಶೇಟ್ ಮನವಿ ಮಾಡಿದ್ದಾರೆ.</p>.<p class="Subhead"><strong>ನಗರದಲ್ಲಿ ಭಾರಿ ಮಳೆ: </strong>ಕಾರವಾರದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಮಳೆಯಾಯಿತು. 2.30ರ ಸುಮಾರಿಗೆ ಆರಂಭವಾದ ವರ್ಷಧಾರೆಯು ಸಂಜೆ ಐದರವರೆಗೂ ಮುಂದುವರಿಯಿತು. ನಗರದ ಕೆ.ಎಚ್.ಬಿ ಕಾಲೊನಿ, ಪದ್ಮನಾಭ ನಗರ ಮುಂತಾದೆಡೆ ರಸ್ತೆಗಳಲ್ಲಿ ಒಂದು ಅಡಿಯಷ್ಟು ನೀರು ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರ್ವೆ ಗ್ರಾಮದಲ್ಲಿಈಚೆಗೆಸುರಿದ ಭಾರಿ ಮಳೆಗೆ ಉಮರಗಡ್ಡೆ– ಸೀತೆಮಕ್ಕಿ ನಡುವೆ ನಿರ್ಮಿಸಲಾದನೂತನಸೇತುವೆಯ ಪಿಚ್ಚಿಂಗ್ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಗ್ರಾಮ ಪಂಚಾಯ್ತಿ ಕಚೇರಿಯಿಂದನಾಲ್ಕುಕಿಲೋಮೀಟರ್ ದೂರದಲ್ಲಿರುವ ಶಿರ್ವೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ಇತರ ಸಮಾಜದವರ 150ಮನೆಗಳಿವೆ.ಅಂದಾಜು 800ಜನರು ವಾಸಿಸುತ್ತಿದ್ದಾರೆ. ಕೃಷಿಯೇ ಜೀವನಕ್ಕೆ ಆಧಾರವಾಗಿರುವ ಅವರಿಗೆ ಅವಶ್ಯಕ ಸಾಮಗ್ರಿ ತರಲು, ಆರೋಗ್ಯ ತಪಾಸಣೆಗೆ ತೆರಳಲು ಈ ಸೇತುವೆ ಮೂಲಕವೇ ದೇವಳಮಕ್ಕಿಗೆಬರಬೇಕಾಗಿದೆ.</p>.<p>ಜುಲೈ 9ರಂದು ಸುರಿದ ಭಾರಿ ಮಳೆಯಿಂದ ನಾಟಿ ಮಾಡಿದ್ದ ಭತ್ತದ ಸಸಿಗಳೂಕೊಚ್ಚಿಕೊಂಡು ಹೋಗಿದ್ದವು. ಹಳ್ಳದಲ್ಲಿ ನೀರು ಉಕ್ಕಿ ಹರಿದು ಉಮರಗಡ್ಡೆ– ಸೀತೆಮಕ್ಕಿ ಸೇತುವೆಯ ಎರಡೂ ಕಡೆಯ ಪಿಚ್ಚಿಂಗ್ಗಳು ಕೊಚ್ಚಿಹೋದವು.ಎನ್.ಪಿ.ಸಿ.ಎಲ್ ಈ ಸೇತುವೆಯನ್ನು ನಿರ್ಮಿಸಿದ್ದು, ಕಾಮಗಾರಿ ಪರಿಪೂರ್ಣವಾಗುವ ಹಂತದಲ್ಲಿತ್ತು. ಮಳೆ ಒಂದುವೇಳೆ ಮತ್ತಷ್ಟು ಜೋರಾದರೆ ಸಂಪರ್ಕವೇ ಕಡಿತಗೊಳ್ಳುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿರಾಜೇಶ ಗೌಡ.</p>.<p>ಶಿರ್ವೆ ಗ್ರಾಮದರಿಗೆ ಸಂಪರ್ಕ ಕೊಂಡಿಯಾಗಿರುವಈಸೇತುವೆಯನ್ನು ಸಂಬಂಧ ಪಟ್ಟದವರು ಶೀಘ್ರವೇಸರಿಪಡಿಸಬೇಕು. ವಾಹನ ಸಂಚಾರಕ್ಕೆಯೋಗ್ಯವಾಗುವಂತೆ ಮಾಡಿಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕುಎಂದು ಯುವ ಮುಖಂಡಪ್ರಜ್ವಲ್ ಬಾಬುರಾಯ ಶೇಟ್ ಮನವಿ ಮಾಡಿದ್ದಾರೆ.</p>.<p class="Subhead"><strong>ನಗರದಲ್ಲಿ ಭಾರಿ ಮಳೆ: </strong>ಕಾರವಾರದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಮಳೆಯಾಯಿತು. 2.30ರ ಸುಮಾರಿಗೆ ಆರಂಭವಾದ ವರ್ಷಧಾರೆಯು ಸಂಜೆ ಐದರವರೆಗೂ ಮುಂದುವರಿಯಿತು. ನಗರದ ಕೆ.ಎಚ್.ಬಿ ಕಾಲೊನಿ, ಪದ್ಮನಾಭ ನಗರ ಮುಂತಾದೆಡೆ ರಸ್ತೆಗಳಲ್ಲಿ ಒಂದು ಅಡಿಯಷ್ಟು ನೀರು ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>