<p>ಶಿರಸಿ: ಹಳ್ಳಿಗಳಲ್ಲಿ ಮೊಬೈಲ್ ಟವರ್ ಸ್ಥಾಪನೆ, ಫೈಬರ್ ಟು ದಿ ಹೋಮ್ (ಎಫ್.ಟಿ.ಟಿ.ಎಚ್.) ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಮಲೆನಾಡು ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ನಗರದ ಟಿ.ಎಂ.ಎಸ್ ಸಭಾಂಗಣದಲ್ಲಿ ಭಾನುವಾರ ಶಿರಸಿ ಟೆಕ್ ಫೋರಂ ಆಯೋಜಿಸಿದ್ದ ‘ವರ್ಕ್ ಫ್ರಂ ಹೋಮ್ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳು’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಳ್ಳಿಗಳಿಗೆ ಮರಳಿದ ಯುವಜನರನ್ನು ಸೆಳೆದಿಟ್ಟುಕೊಳ್ಳುವ ಅಗತ್ಯವಿದೆ. ವರ್ಕ್ ಫ್ರಂ ಹೋಮ್ ಇಚ್ಛಾಶಕ್ತಿ ಕಾರಣದಿಂದ ಕಡ್ಡಾಯವಾಗುವ ಸ್ಥಿತಿ ನಿರ್ಮಾಣಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಶಿರಸಿ ಫೋರಂ ಟೆಕ್ ಪ್ರಮುಖ ಎಸ್.ಜಿ.ಹೆಗಡೆ ಮಾತನಾಡಿ, ‘ತಂತ್ರಜ್ಞಾನವು ಚಾಲಕನಂತೆ ಆರ್ಥಿಕತೆ, ವಿಜ್ಞಾನ, ಶಿಕ್ಷಣ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳನ್ನು ನಿಭಾಯಿಸುತ್ತಿದೆ’ ಎಂದರು.</p>.<p>ಚಾರ್ಟೆಡ್ ಅಕೌಂಟೆಂಟ್ ವಿನಯ ಹೆಗಡೆ, ‘ದೊಡ್ಡ ಕಂಪನಿಗಳು ಜಿಲ್ಲೆಯಲ್ಲಿ ಶಾಖೆ ಆರಂಭಿಸಲು ಒತ್ತಡ ಹಾಕಬಹುದು. ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಇಚ್ಛಾಶಕ್ತಿ ಪ್ರದರ್ಶಿಸಿ’ ಎಂದರು.</p>.<p>ಹಳ್ಳಿಗಳಲ್ಲಿ ನಗರ ಮಾದರಿಯ ಸೌಕರ್ಯ ಒದಗಿಸುವ ಪ್ರಯತ್ನವಾಗಲಿ. ಕಾರ್ಪೊರೇಟ್ ಸ್ನೇಹಿ ವಾತಾವರಣ ರೂಪುಗೊಳ್ಳಲಿ ಎಂದು ಅರವಿಂದ ಭಟ್ಟ ಹೇಳಿದರು. ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸುವ ಸಂಬಂಧ ಕಂಪನಿಗಳ ಮೇಲೆ ಸರ್ಕಾರ ಒತ್ತಡ ಹೇರಲಿ ಎಂದು ವಿನಾಯಕ ಒತ್ತಾಯಿಸಿದರು.</p>.<p>ಸಹಕಾರ ಸಂಘಗಳ ಸಹಯೋಗದೊಂದಿಗೆ ಗ್ರಾಮಾಂತರ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯ ಸೇವಾ ಕೇಂದ್ರ ಸ್ಥಾಪಿಸಬಹುದು ಎಂದು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸಲಹೆ ನೀಡಿದರು.</p>.<p>ರವಿ ಹೆಗಡೆ ಹೂವಿನಮನೆ, ಬಿಎಸ್ಎನ್ಎಲ್ ಡಿಜಿಎಂ ರಾಜೇಶ್ವರಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು. ಸೀತಾರಾಮ ಭಟ್ಟ ಕೆರೆಕೈ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಹಳ್ಳಿಗಳಲ್ಲಿ ಮೊಬೈಲ್ ಟವರ್ ಸ್ಥಾಪನೆ, ಫೈಬರ್ ಟು ದಿ ಹೋಮ್ (ಎಫ್.ಟಿ.ಟಿ.ಎಚ್.) ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಮಲೆನಾಡು ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ನಗರದ ಟಿ.ಎಂ.ಎಸ್ ಸಭಾಂಗಣದಲ್ಲಿ ಭಾನುವಾರ ಶಿರಸಿ ಟೆಕ್ ಫೋರಂ ಆಯೋಜಿಸಿದ್ದ ‘ವರ್ಕ್ ಫ್ರಂ ಹೋಮ್ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳು’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಳ್ಳಿಗಳಿಗೆ ಮರಳಿದ ಯುವಜನರನ್ನು ಸೆಳೆದಿಟ್ಟುಕೊಳ್ಳುವ ಅಗತ್ಯವಿದೆ. ವರ್ಕ್ ಫ್ರಂ ಹೋಮ್ ಇಚ್ಛಾಶಕ್ತಿ ಕಾರಣದಿಂದ ಕಡ್ಡಾಯವಾಗುವ ಸ್ಥಿತಿ ನಿರ್ಮಾಣಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಶಿರಸಿ ಫೋರಂ ಟೆಕ್ ಪ್ರಮುಖ ಎಸ್.ಜಿ.ಹೆಗಡೆ ಮಾತನಾಡಿ, ‘ತಂತ್ರಜ್ಞಾನವು ಚಾಲಕನಂತೆ ಆರ್ಥಿಕತೆ, ವಿಜ್ಞಾನ, ಶಿಕ್ಷಣ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳನ್ನು ನಿಭಾಯಿಸುತ್ತಿದೆ’ ಎಂದರು.</p>.<p>ಚಾರ್ಟೆಡ್ ಅಕೌಂಟೆಂಟ್ ವಿನಯ ಹೆಗಡೆ, ‘ದೊಡ್ಡ ಕಂಪನಿಗಳು ಜಿಲ್ಲೆಯಲ್ಲಿ ಶಾಖೆ ಆರಂಭಿಸಲು ಒತ್ತಡ ಹಾಕಬಹುದು. ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಇಚ್ಛಾಶಕ್ತಿ ಪ್ರದರ್ಶಿಸಿ’ ಎಂದರು.</p>.<p>ಹಳ್ಳಿಗಳಲ್ಲಿ ನಗರ ಮಾದರಿಯ ಸೌಕರ್ಯ ಒದಗಿಸುವ ಪ್ರಯತ್ನವಾಗಲಿ. ಕಾರ್ಪೊರೇಟ್ ಸ್ನೇಹಿ ವಾತಾವರಣ ರೂಪುಗೊಳ್ಳಲಿ ಎಂದು ಅರವಿಂದ ಭಟ್ಟ ಹೇಳಿದರು. ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸುವ ಸಂಬಂಧ ಕಂಪನಿಗಳ ಮೇಲೆ ಸರ್ಕಾರ ಒತ್ತಡ ಹೇರಲಿ ಎಂದು ವಿನಾಯಕ ಒತ್ತಾಯಿಸಿದರು.</p>.<p>ಸಹಕಾರ ಸಂಘಗಳ ಸಹಯೋಗದೊಂದಿಗೆ ಗ್ರಾಮಾಂತರ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯ ಸೇವಾ ಕೇಂದ್ರ ಸ್ಥಾಪಿಸಬಹುದು ಎಂದು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸಲಹೆ ನೀಡಿದರು.</p>.<p>ರವಿ ಹೆಗಡೆ ಹೂವಿನಮನೆ, ಬಿಎಸ್ಎನ್ಎಲ್ ಡಿಜಿಎಂ ರಾಜೇಶ್ವರಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು. ಸೀತಾರಾಮ ಭಟ್ಟ ಕೆರೆಕೈ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>