ನಮ್ಮ ಕನಸಿನ ಮುಂಡಗೋಡ, ರೋಟರಿ ಕ್ಲಬ್ ಹಾಗೂ ಬಸವೇಶ್ವರ ದೇವಸ್ಥಾನಸಮಿತಿಸದಸ್ಯರು ಭಾನುವಾರ ಬಸವಣ್ಣ ಹೊಂಡವನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದರು. ಮದ್ಯದ ಬಾಟಲಿಗಳು, ತೆಂಗಿನಕಾಯಿ, ಭಿನ್ನಗೊಂಡ ದೇವರ ಫೋಟೊಗಳು, ಪ್ಲಾಸ್ಟಿಕ್ ಚೀಲಗಳು, ಬಟ್ಟೆಯ ತುಂಡುಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಹೊಂಡದಿಂದ ಬೇರ್ಪಡಿಸಿದರು.