<p><strong>ಶಿರಸಿ</strong>: ನೆರೆ ಹಾವಳಿಗೆ ತುತ್ತಾಗಿರುವ ಯಲ್ಲಾಪುರ ತಾಲ್ಲೂಕಿನ ಕಲ್ಲೇಶ್ವರ ಭಾಗದಲ್ಲಿ ಸ್ವರ್ಣವಲ್ಲಿ ಶ್ರೀ ಮಾರ್ದರ್ಶನದಂತೆ ಹವ್ಯಕ ಜಾಗೃತ ಕಾರ್ಯಪಡೆಯ ನೇತೃತ್ವದಲ್ಲಿ ಭಾನುವಾರ ದಿನಸಿ ವಿತರಣೆ ಹಾಗೂ ಐ.ಎಂ.ಎ.ಶಿರಸಿ ಘಟಕದ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.</p>.<p>ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ, ಕೋನಾಳ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರಿಗೆ ನೆರವು ನೀಡಲಾಯಿತು. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ನಡುವೆಯೂ ಸ್ವಯಂ ಸೇವಕರು ಗ್ರಾಮಗಳಿಗೆ ತೆರಳಿದ್ದರು.</p>.<p>ಹವ್ಯಕ ಜಾಗೃತ ಕಾರ್ಯಪಡೆ ಸಂಚಾಲಕ ಸಚ್ಚಿದಾನಂದ ಹೆಗಡೆ, ರಾಘವ ಭಟ್ಟ ಹಿತ್ಲಳ್ಳಿ, ಸತ್ಯನಾರಾಯಣ ಭಟ್ಟ ವರ್ಗಾಸರ, ಗಣಪತಿ ಮೂಲೆಮನೆ, ಪ್ರಶಾಂತ ಹೆಗ್ಗಾರ, ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್ಟ ಇತರರು ಇದ್ದರು.</p>.<p>ಡಾ.ದಿನೇಶ ಹೆಗಡೆ, ಡಾ. ಸುಮನ್ ಹೆಗಡೆ, ಡಾ.ರವಿಕಿರಣ ಪಟವರ್ಧನ, ಡಾ. ಮಧುಕೇಶ್ವರ ಜಿ. ವಿ., ಡಾ.ಜಿ.ಎಮ್.ಹೆಗಡೆ, ಡಾ.ಕೃಷ್ಣಮೂರ್ತಿ ರಾಯ್ಸದ್, ಡಾ.ವಿಕ್ರಮ್ ಹೆಗಡೆ, ಡಾ.ವಿಶ್ವನಾಥ ಅಂಕದ, ವಿನಾಯಕ ಭಾಗ್ವತ್, ಪ್ರಶಾಂತ ಹೆಗಡೆ ಭಾಗಿಯಾಗಿದ್ದರು.</p>.<p>ಪರಿಹಾರ ವಿತರಣಾ ಕೆಲಸಕ್ಕೆ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮತ್ತಿಘಟ್ಟಾದ ಗ್ರೀನ್ ರಿವೈನ್ ಮಾಲೀಕ ಪ್ರಮೋದ ವೈದ್ಯ ನೆರವಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ನೆರೆ ಹಾವಳಿಗೆ ತುತ್ತಾಗಿರುವ ಯಲ್ಲಾಪುರ ತಾಲ್ಲೂಕಿನ ಕಲ್ಲೇಶ್ವರ ಭಾಗದಲ್ಲಿ ಸ್ವರ್ಣವಲ್ಲಿ ಶ್ರೀ ಮಾರ್ದರ್ಶನದಂತೆ ಹವ್ಯಕ ಜಾಗೃತ ಕಾರ್ಯಪಡೆಯ ನೇತೃತ್ವದಲ್ಲಿ ಭಾನುವಾರ ದಿನಸಿ ವಿತರಣೆ ಹಾಗೂ ಐ.ಎಂ.ಎ.ಶಿರಸಿ ಘಟಕದ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.</p>.<p>ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ, ಕೋನಾಳ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರಿಗೆ ನೆರವು ನೀಡಲಾಯಿತು. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ನಡುವೆಯೂ ಸ್ವಯಂ ಸೇವಕರು ಗ್ರಾಮಗಳಿಗೆ ತೆರಳಿದ್ದರು.</p>.<p>ಹವ್ಯಕ ಜಾಗೃತ ಕಾರ್ಯಪಡೆ ಸಂಚಾಲಕ ಸಚ್ಚಿದಾನಂದ ಹೆಗಡೆ, ರಾಘವ ಭಟ್ಟ ಹಿತ್ಲಳ್ಳಿ, ಸತ್ಯನಾರಾಯಣ ಭಟ್ಟ ವರ್ಗಾಸರ, ಗಣಪತಿ ಮೂಲೆಮನೆ, ಪ್ರಶಾಂತ ಹೆಗ್ಗಾರ, ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್ಟ ಇತರರು ಇದ್ದರು.</p>.<p>ಡಾ.ದಿನೇಶ ಹೆಗಡೆ, ಡಾ. ಸುಮನ್ ಹೆಗಡೆ, ಡಾ.ರವಿಕಿರಣ ಪಟವರ್ಧನ, ಡಾ. ಮಧುಕೇಶ್ವರ ಜಿ. ವಿ., ಡಾ.ಜಿ.ಎಮ್.ಹೆಗಡೆ, ಡಾ.ಕೃಷ್ಣಮೂರ್ತಿ ರಾಯ್ಸದ್, ಡಾ.ವಿಕ್ರಮ್ ಹೆಗಡೆ, ಡಾ.ವಿಶ್ವನಾಥ ಅಂಕದ, ವಿನಾಯಕ ಭಾಗ್ವತ್, ಪ್ರಶಾಂತ ಹೆಗಡೆ ಭಾಗಿಯಾಗಿದ್ದರು.</p>.<p>ಪರಿಹಾರ ವಿತರಣಾ ಕೆಲಸಕ್ಕೆ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮತ್ತಿಘಟ್ಟಾದ ಗ್ರೀನ್ ರಿವೈನ್ ಮಾಲೀಕ ಪ್ರಮೋದ ವೈದ್ಯ ನೆರವಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>