<p><strong>ಶಿರಸಿ</strong>: ಎರಡು ವಾರಗಳಿಂದ ಕೊರೊನಾ ಸೋಂಕು ಗ್ರಾಮೀಣ ಭಾಗಗಳಿಗೂ ವ್ಯಾಪಿಸಿದೆ. ಆದರೆ, ಸೋಂಕಿಗಿಂತ ಹೆಚ್ಚಾಗಿ, ಸುಳ್ಳು ಸುದ್ದಿಗಳ ಹಾವಳಿಯೇ ಹಳ್ಳಿಗರನ್ನು ಕಂಗೆಡಿಸಿದೆ. ಇದನ್ನೇ ಆಧರಿಸಿ, ತಾಲ್ಲೂಕಿನ ಓಣಿಕೇರಿ ಸಮೀಪದ ಜಾಡಿಮನೆಯ ಪ್ರಸಾದ ಹೆಗಡೆ ಮತ್ತು ಸ್ನೇಹಿತರು ಕಿರುಚಿತ್ರ ತಯಾರಿಸಿದ್ದಾರೆ.</p>.<p>‘ಕೊರೊನಾ ಅವಾಂತರ’ ಶೀರ್ಷಿಕೆಯ ಒಂಬತ್ತು ನಿಮಿಷಗಳ ಈ ಕಿರುಚಿತ್ರವು ಹವ್ಯಕ ಕನ್ನಡ ಸಂಭಾಷಣೆಯನ್ನೊಳಗೊಂಡಿದೆ. ಒಂದು ವಾರದಲ್ಲಿ 3000ಕ್ಕೂ ಅಧಿಕ ಜನರು ಈ ಕಿರುಚಿತ್ರವನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಕಟ್ಟೆ ಪಂಚಾಯಿತಿ ಮಾಡಿರುವ ಸ್ಥಳಗಳಲ್ಲಿ ಕೊರೊನಾ ಸುದ್ದಿ ಸದ್ದು ಮಾಡುತ್ತದೆ. ನಾಲ್ಕೈದು ದಿನಗಳ ನಂತರ ಈ ಸುದ್ದಿ ಸುಳ್ಳೆಂದು ಗ್ರಾಮಸ್ಥರಿಗೆ ಅರಿವಾಗುತ್ತದೆ. ಅಂತೆ–ಕಂತೆಗಳು, ಹಳ್ಳಿಗರ ಆತಂಕ, ಇದರಿಂದ ಉಂಟಾಗುವ ತೊಂದರೆ ಇಂತಹ ಹಲವಾರು ದೈನಂದಿನ ಸಂಗತಿಗಳನ್ನು ಒಳಗೊಂಡಿರುವ ಚಿತ್ರದಲ್ಲಿ ಜಾಡಿಮನೆಯ ಹಿರಿ–ಕಿರಿಯರು ಸೇರಿ 10ಕ್ಕೂ ಹೆಚ್ಚು ಮಂದಿ ಅಭಿನಯಿಸಿದ್ದಾರೆ.</p>.<p>ಮೈಸೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಪ್ರಸಾದ ಹೆಗಡೆ, ಲಾಕ್ಡೌನ್ ಸಂದರ್ಭದಲ್ಲಿ ಮನೆ ಸೇರಿದ್ದಾರೆ. ಹಳ್ಳಿಯಲ್ಲೇ ಇದ್ದು, ಹಳ್ಳಿಗರನ್ನೇ ಸೇರಿಸಿಕೊಂಡು, ಸಹೋದರ ಉತ್ತಮ ಹೆಗಡೆ ಜೊತೆ ಸೇರಿ ಈ ಕಿರುಚಿತ್ರ ತಯಾರಿಸಿದ್ದಾರೆ. https://youtu.be/haJKdjtneRM ಈ ಲಿಂಕ್ನಲ್ಲಿ ಕಿರುಚಿತ್ರ ವೀಕ್ಷಿಸಬಹುದು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಎರಡು ವಾರಗಳಿಂದ ಕೊರೊನಾ ಸೋಂಕು ಗ್ರಾಮೀಣ ಭಾಗಗಳಿಗೂ ವ್ಯಾಪಿಸಿದೆ. ಆದರೆ, ಸೋಂಕಿಗಿಂತ ಹೆಚ್ಚಾಗಿ, ಸುಳ್ಳು ಸುದ್ದಿಗಳ ಹಾವಳಿಯೇ ಹಳ್ಳಿಗರನ್ನು ಕಂಗೆಡಿಸಿದೆ. ಇದನ್ನೇ ಆಧರಿಸಿ, ತಾಲ್ಲೂಕಿನ ಓಣಿಕೇರಿ ಸಮೀಪದ ಜಾಡಿಮನೆಯ ಪ್ರಸಾದ ಹೆಗಡೆ ಮತ್ತು ಸ್ನೇಹಿತರು ಕಿರುಚಿತ್ರ ತಯಾರಿಸಿದ್ದಾರೆ.</p>.<p>‘ಕೊರೊನಾ ಅವಾಂತರ’ ಶೀರ್ಷಿಕೆಯ ಒಂಬತ್ತು ನಿಮಿಷಗಳ ಈ ಕಿರುಚಿತ್ರವು ಹವ್ಯಕ ಕನ್ನಡ ಸಂಭಾಷಣೆಯನ್ನೊಳಗೊಂಡಿದೆ. ಒಂದು ವಾರದಲ್ಲಿ 3000ಕ್ಕೂ ಅಧಿಕ ಜನರು ಈ ಕಿರುಚಿತ್ರವನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಕಟ್ಟೆ ಪಂಚಾಯಿತಿ ಮಾಡಿರುವ ಸ್ಥಳಗಳಲ್ಲಿ ಕೊರೊನಾ ಸುದ್ದಿ ಸದ್ದು ಮಾಡುತ್ತದೆ. ನಾಲ್ಕೈದು ದಿನಗಳ ನಂತರ ಈ ಸುದ್ದಿ ಸುಳ್ಳೆಂದು ಗ್ರಾಮಸ್ಥರಿಗೆ ಅರಿವಾಗುತ್ತದೆ. ಅಂತೆ–ಕಂತೆಗಳು, ಹಳ್ಳಿಗರ ಆತಂಕ, ಇದರಿಂದ ಉಂಟಾಗುವ ತೊಂದರೆ ಇಂತಹ ಹಲವಾರು ದೈನಂದಿನ ಸಂಗತಿಗಳನ್ನು ಒಳಗೊಂಡಿರುವ ಚಿತ್ರದಲ್ಲಿ ಜಾಡಿಮನೆಯ ಹಿರಿ–ಕಿರಿಯರು ಸೇರಿ 10ಕ್ಕೂ ಹೆಚ್ಚು ಮಂದಿ ಅಭಿನಯಿಸಿದ್ದಾರೆ.</p>.<p>ಮೈಸೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಪ್ರಸಾದ ಹೆಗಡೆ, ಲಾಕ್ಡೌನ್ ಸಂದರ್ಭದಲ್ಲಿ ಮನೆ ಸೇರಿದ್ದಾರೆ. ಹಳ್ಳಿಯಲ್ಲೇ ಇದ್ದು, ಹಳ್ಳಿಗರನ್ನೇ ಸೇರಿಸಿಕೊಂಡು, ಸಹೋದರ ಉತ್ತಮ ಹೆಗಡೆ ಜೊತೆ ಸೇರಿ ಈ ಕಿರುಚಿತ್ರ ತಯಾರಿಸಿದ್ದಾರೆ. https://youtu.be/haJKdjtneRM ಈ ಲಿಂಕ್ನಲ್ಲಿ ಕಿರುಚಿತ್ರ ವೀಕ್ಷಿಸಬಹುದು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>