‘ಅಂದಿನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಅಂದು ವಿಪರೀತ ಮಳೆ ಸುರಿದಿತ್ತು. ಇಲ್ಲದಿದ್ದರೆ ಜಿಲ್ಲೆಯಲ್ಲೇ ಅತಿ ಹೆಚ್ಚು ಜನ ಸೇರಿದ್ದ ಕಾರ್ಯಕ್ರಮ ಇದಾಗಬಹುದಿತ್ತು’ ಎಂದು ರಮಾನಂದ ಐನಕೈ ಹೇಳಿದರು. ‘ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಎಸ್ಪಿಬಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಐನಕೈ ಗ್ರಾಮದಲ್ಲಿರುವ ನಮ್ಮ ಮನೆಗೂ ಬಂದಿದ್ದರು. ಅಲ್ಲಿ ಸ್ಥಳೀಯ ವಿಶೇಷ ಖಾದ್ಯ ತೊಡೆದೇವು ಸವಿದು ಖುಷಿಪಟ್ಟಿದ್ದರು. ಚೆನ್ನೈಗೆ ಮರಳಿದ ನಂತರ ದೂರವಾಣಿ ಕರೆ ಮಾಡಿ ಶಿರಸಿಯ ಜನ, ತೊಡೆದೇವು ಎಲ್ಲವೂ ನನಗಿಷ್ಟವಾದವು ಎಂದಿದ್ದರು’ ಎಂದು ತಿಳಿಸಿದರು.