ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

Last Updated 20 ಜನವರಿ 2021, 12:43 IST
ಅಕ್ಷರ ಗಾತ್ರ

ಕಾರವಾರ: ಸಂಸತ್ತಿನ ಸ್ಥಾಯಿ ಸಮಿತಿಯ (ರಕ್ಷಣಾ ಇಲಾಖೆ) 16 ಸದಸ್ಯರು, ಅಧ್ಯಕ್ಷ ಜುವಲ್ ಓರಮ್ ನೇತೃತ್ವದಲ್ಲಿ ಇಲ್ಲಿನ ‘ಸೀಬರ್ಡ್’ ನೌಕಾನೆಲೆಗೆ ಬುಧವಾರ ಅಧ್ಯಯನ ಪ್ರವಾಸ ಕೈಗೊಂಡರು.

ಅವರನ್ನು ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬರಮಾಡಿಕೊಂಡರು. ನೌಕಾಪಡೆಯು ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ಕಾರ್ಯ ಸನ್ನದ್ಧ ಸ್ಥಿತಿಯಲ್ಲಿರುವುದು ಮತ್ತು ಕರಾವಳಿ ಭದ್ರತೆಯ ಬಗ್ಗೆ ತಂಡದ ಸದಸ್ಯರು ನೌಕಾಪಡೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕಾರವಾರದ ‘ಪ್ರಾಜೆಕ್ಟ್ ಸೀಬರ್ಡ್’ ಎರಡನೇ ಹಂತದ ಕಾಮಗಾರಿಯ ಪ್ರಗತಿ ಹಾಗೂ ನೌಕಾಪಡೆಯ ನೌಕೆಗಳ ದುರಸ್ತಿ ಯಾರ್ಡ್‌ನ ಆಧುನೀಕರಣ, ಯುದ್ಧವಿಮಾನ ವಾಹಕ ನೌಕೆ ‘ಐ.ಎನ್.ಎಸ್. ವಿಕ್ರಮಾದಿತ್ಯ’ದ ಸಾಮರ್ಥ್ಯದ ಕುರಿತು ಅಧಿಕಾರಿಗಳು ವಿವರಿಸಿದರು. ನೌಕೆಗಳನ್ನು ಮೇಲೆತ್ತುವ ಸೌಕರ್ಯದ ಪ್ರಾತ್ಯಕ್ಷಿಕೆ, ಎರಡನೇ ಹಂತದ ಅಭಿವೃದ್ಧಿಯ (ಪ್ರಾಜೆಕ್ಟ್ ಸೀಬರ್ಡ್ ಫೇಸ್ 2 ಎ) ಭಾಗವಾಗಿ ನೌಕಾನೆಲೆಯಲ್ಲಿರುವ ಮೂಲಸೌಕರ್ಯಗಳನ್ನೂ ತಂಡವು ಪರಿಶೀಲಿಸಿತು.

ಕಾರವಾರದಿಂದ ಸಂಜೆ ಪುನಃ ಗೋವಾಕ್ಕೆ ತೆರಳಿದ ಸದಸ್ಯರು, ರಕ್ಷಣಾ ಇಲಾಖೆಯ ಸಾರ್ವಜನಿಕ ವಲಯದ ಉದ್ದಿಮೆಗಳ (ಡಿ.ಪಿ.ಎಸ್.ಯು) ಆಧುನೀಕರಣದ ಬಗ್ಗೆ ಚರ್ಚಿಸಲಿದ್ದಾರೆ. ಸಮಿತಿಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಸೇರಿದಂತೆ 21 ಸಂಸದರು ಮತ್ತು 10 ಮಂದಿ ರಾಜ್ಯಸಭೆ ಸದಸ್ಯರಿದ್ದಾರೆ. ರಾಜ್ಯಸಭೆ ಸದಸ್ಯ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಅವರನ್ನೂ ಸೇರಿದಂತೆ 16 ಮಂದಿ ಮಾತ್ರ ಕಾರವಾರಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT