ಮಳೆಯ ರಭಸಕ್ಕೆ ತಾಲ್ಲೂಕಿನಲ್ಲಿ ಸುಮಾರು ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ದಾಸನಕೊಪ್ಪದ ಮಾದೇವಿ ಭೋವಿ ವಡ್ಡರ ಅವರಿಗೆ ಸೇರಿದ ಮನೆಯ ಮುಂಭಾಗ ಕುಸಿದು ಬಿದ್ದಿದೆ. ಮಡಿಕೇಶ್ವರದ ಬಂಗಾರಪ್ಪ ಚೆನ್ನಯ್ಯ ಅವರ ಮನೆಗೆ ಭಾಗಶಃ ಹಾನಿ ಉಂಟಾಗಿದ್ದು, ಪರಶುರಾಮ ಕೆರಿಯಮ್ಮನವರ ಅವರ ಮನೆಯ ಗೋಡೆ ಪೂರ್ಣ ಕುಸಿದು ಬಿದ್ದಿದೆ. ಜಾನ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಿಲಗಾರ ಗ್ರಾಮದ ಗುತ್ಯಾ ಚಲವಾದಿ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.