<p><strong>ಕಾರವಾರ:</strong> ಗೋವಾದ ಪೆರ್ನೆಂ ಬಳಿ ಕುಸಿದಿದ್ದ ಕೊಂಕಣ ರೈಲ್ವೆಯ ಸುರಂಗದ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರವು ಪುನರಾರಂಭವಾಗಿದೆ.</p>.<p>ಕೊಂಕಣ ರೈಲ್ವೆಯ ಕಾರವಾರ ವಲಯದಲ್ಲಿರುವ ಈ ಸುರಂಗದಲ್ಲಿ ಆ.6ರಂದು ಮಣ್ಣು ಕುಸಿದಿತ್ತು. ಆದ್ದರಿಂದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಈ ಮಾರ್ಗದಲ್ಲಿ ಪ್ರಮುಖವಾಗಿ ಸಂಚರಿಸುವ ಆರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲುಗಳು ಮಡಗಾಂವ್– ಲೋಂಡಾ–ಮೀರಜ್– ಪುಣೆ– ಪನ್ವೇಲ್– ಕಲ್ಯಾಣ್ ಮಾರ್ಗದಲ್ಲಿ ಸುತ್ತುಬಳಸಿ ಸಂಚರಿಸುತ್ತಿದ್ದವು.</p>.<p>‘ಈ ಸುರಂಗವು (384ನೇ ಕಿಲೋಮೀಟರ್ನಲ್ಲಿರುವ 6–7 ಸಂಖ್ಯೆ) ಮದುರೆ ಮತ್ತು ಪೆರ್ನೆಂ ರೈಲು ನಿಲ್ದಾಣಗಳ ನಡುವೆ ಇದೆ. ಅದರ ದುರಸ್ತಿ ಕಾರ್ಯವು ಪೂರ್ಣಗೊಂಡಿದ್ದು, ಹಳಿ ಸುರಕ್ಷತಾ ಪ್ರಮಾಣ ಪತ್ರವನ್ನು ಸೆ.15ರಂದು ಪಡೆದುಕೊಳ್ಳಲಾಗಿದೆ’ ಎಂದು ಕೊಂಕಣ ರೈಲ್ವೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.</p>.<p>ಸುರಂಗ ದುರಸ್ತಿಯಾಗಿರುವ ಕಾರಣ ಈ ರೈಲುಗಳು ಮೊದಲಿನಂತೆ ಮಡಗಾಂ– ರೋಹಾ– ಪನ್ವೇಲ್– ಕಲ್ಯಾಣ್ ಮೂಲಕ ಸಂಚರಿಸಲಿವೆ.</p>.<p class="Subhead"><strong>ರೈಲುಗಳು:</strong>ಕಾರವಾರ, ಉಡುಪಿ, ಮಂಗಳೂರು ಮೂಲಕ ಸಾಗುವ ಎರ್ನಾಕುಳಂ ಜಂಕ್ಷನ್– ಹಜರತ್ ನಿಜಾಮುದ್ದೀನ್ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 02617/02618), ಮೂಲಕ ಸಾಗುವ ಹಜರತ್ ನಿಜಾಮುದ್ದೀನ್– ಎರ್ನಾಕುಳಂ ಜಂಕ್ಷನ್ ಡುರಂತೊ ಎಕ್ಸ್ಪ್ರೆಸ್ (ರೈಲು ಸಂಖ್ಯೆ 02284/ 02283), ನವದೆಹಲಿ– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 02432/ 02431), ಲೋಕಮಾನ್ಯ ತಿಲಕ್ ಟರ್ಮಿನಸ್– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 06345/ 06346).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಗೋವಾದ ಪೆರ್ನೆಂ ಬಳಿ ಕುಸಿದಿದ್ದ ಕೊಂಕಣ ರೈಲ್ವೆಯ ಸುರಂಗದ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರವು ಪುನರಾರಂಭವಾಗಿದೆ.</p>.<p>ಕೊಂಕಣ ರೈಲ್ವೆಯ ಕಾರವಾರ ವಲಯದಲ್ಲಿರುವ ಈ ಸುರಂಗದಲ್ಲಿ ಆ.6ರಂದು ಮಣ್ಣು ಕುಸಿದಿತ್ತು. ಆದ್ದರಿಂದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಈ ಮಾರ್ಗದಲ್ಲಿ ಪ್ರಮುಖವಾಗಿ ಸಂಚರಿಸುವ ಆರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲುಗಳು ಮಡಗಾಂವ್– ಲೋಂಡಾ–ಮೀರಜ್– ಪುಣೆ– ಪನ್ವೇಲ್– ಕಲ್ಯಾಣ್ ಮಾರ್ಗದಲ್ಲಿ ಸುತ್ತುಬಳಸಿ ಸಂಚರಿಸುತ್ತಿದ್ದವು.</p>.<p>‘ಈ ಸುರಂಗವು (384ನೇ ಕಿಲೋಮೀಟರ್ನಲ್ಲಿರುವ 6–7 ಸಂಖ್ಯೆ) ಮದುರೆ ಮತ್ತು ಪೆರ್ನೆಂ ರೈಲು ನಿಲ್ದಾಣಗಳ ನಡುವೆ ಇದೆ. ಅದರ ದುರಸ್ತಿ ಕಾರ್ಯವು ಪೂರ್ಣಗೊಂಡಿದ್ದು, ಹಳಿ ಸುರಕ್ಷತಾ ಪ್ರಮಾಣ ಪತ್ರವನ್ನು ಸೆ.15ರಂದು ಪಡೆದುಕೊಳ್ಳಲಾಗಿದೆ’ ಎಂದು ಕೊಂಕಣ ರೈಲ್ವೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.</p>.<p>ಸುರಂಗ ದುರಸ್ತಿಯಾಗಿರುವ ಕಾರಣ ಈ ರೈಲುಗಳು ಮೊದಲಿನಂತೆ ಮಡಗಾಂ– ರೋಹಾ– ಪನ್ವೇಲ್– ಕಲ್ಯಾಣ್ ಮೂಲಕ ಸಂಚರಿಸಲಿವೆ.</p>.<p class="Subhead"><strong>ರೈಲುಗಳು:</strong>ಕಾರವಾರ, ಉಡುಪಿ, ಮಂಗಳೂರು ಮೂಲಕ ಸಾಗುವ ಎರ್ನಾಕುಳಂ ಜಂಕ್ಷನ್– ಹಜರತ್ ನಿಜಾಮುದ್ದೀನ್ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 02617/02618), ಮೂಲಕ ಸಾಗುವ ಹಜರತ್ ನಿಜಾಮುದ್ದೀನ್– ಎರ್ನಾಕುಳಂ ಜಂಕ್ಷನ್ ಡುರಂತೊ ಎಕ್ಸ್ಪ್ರೆಸ್ (ರೈಲು ಸಂಖ್ಯೆ 02284/ 02283), ನವದೆಹಲಿ– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 02432/ 02431), ಲೋಕಮಾನ್ಯ ತಿಲಕ್ ಟರ್ಮಿನಸ್– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 06345/ 06346).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>