<p><strong>ಕಾರವಾರ: </strong>ಭಾರತೀಯ ಸೇನೆಯಲ್ಲಿ 19 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಯೋಧ, ಚೆಂಡಿಯಾದ ಭಜನಕೇರಿಯ ದೀಪಕ್ ಪಾಂಡುರಂಗ ಗೌಡ ಅವರನ್ನು ಗ್ರಾಮಸ್ಥರು ಭಾನುವಾರ ಅಭಿಮಾನ ಪೂರ್ವಕವಾಗಿ ಸ್ವಾಗತಿಸಿದರು.</p>.<p>ಅವರು ಸೆ.30ರಂದು ನಿವೃತ್ತಿ ಹೊಂದಿದ್ದು, ಭಾನುವಾರ ತಮ್ಮ ಊರಿಗೆ ಮರಳಿದರು. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಅಸ್ಸಾಂ, ದೆಹಲಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.</p>.<p>ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ತೋಡೂರಿಗೆ ಅವರು ತಲುಪಿದಾಗ ತಂದೆ ಪಾಂಡುರಂಗ ಹಾಗೂ ತಾಯಿ ಗಂಗಾಬಾಯಿ ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಇದೇವೇಳೆ, ಗ್ರಾಮದ ಯುವಕರು ದೀಪಕ್ ಅವರನ್ನು ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.</p>.<p>ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಧನಾ ಪಿ.ಚೆಂಡೇಕರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ತೋಡೂರಿನ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಮಂಡಳಿ, ಭಜನಕೇರಿಯ ಸಣ್ಣಮ್ಮ ಯುವಕ ಮಂಡಳ, ಮಹಾದೇವ ಯುವಕ ಮಂಡಳಿ, ತೋಡೂರಿನ ಒಕ್ಕಲಕೇರಿ ಗೆಳೆಯರ ಬಳಗ, ರಾಯಲ್ ಫ್ರೆಂಡ್ಸ್, ಜಿಲ್ಲಾ ಹಾಲಕ್ಕಿ ಯುವ ಬಳಗ, ಬಂಟದೇವ ಯುವಕ ಮಂಡಳಿಯ ಸದಸ್ಯರು ಹಾಜರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಭಾರತೀಯ ಸೇನೆಯಲ್ಲಿ 19 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಯೋಧ, ಚೆಂಡಿಯಾದ ಭಜನಕೇರಿಯ ದೀಪಕ್ ಪಾಂಡುರಂಗ ಗೌಡ ಅವರನ್ನು ಗ್ರಾಮಸ್ಥರು ಭಾನುವಾರ ಅಭಿಮಾನ ಪೂರ್ವಕವಾಗಿ ಸ್ವಾಗತಿಸಿದರು.</p>.<p>ಅವರು ಸೆ.30ರಂದು ನಿವೃತ್ತಿ ಹೊಂದಿದ್ದು, ಭಾನುವಾರ ತಮ್ಮ ಊರಿಗೆ ಮರಳಿದರು. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಅಸ್ಸಾಂ, ದೆಹಲಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.</p>.<p>ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ತೋಡೂರಿಗೆ ಅವರು ತಲುಪಿದಾಗ ತಂದೆ ಪಾಂಡುರಂಗ ಹಾಗೂ ತಾಯಿ ಗಂಗಾಬಾಯಿ ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಇದೇವೇಳೆ, ಗ್ರಾಮದ ಯುವಕರು ದೀಪಕ್ ಅವರನ್ನು ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.</p>.<p>ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಧನಾ ಪಿ.ಚೆಂಡೇಕರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ತೋಡೂರಿನ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಮಂಡಳಿ, ಭಜನಕೇರಿಯ ಸಣ್ಣಮ್ಮ ಯುವಕ ಮಂಡಳ, ಮಹಾದೇವ ಯುವಕ ಮಂಡಳಿ, ತೋಡೂರಿನ ಒಕ್ಕಲಕೇರಿ ಗೆಳೆಯರ ಬಳಗ, ರಾಯಲ್ ಫ್ರೆಂಡ್ಸ್, ಜಿಲ್ಲಾ ಹಾಲಕ್ಕಿ ಯುವ ಬಳಗ, ಬಂಟದೇವ ಯುವಕ ಮಂಡಳಿಯ ಸದಸ್ಯರು ಹಾಜರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>