ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನಿವೃತ್ತಿ ಹೊಂದಿದ ಯೋಧನಿಗೆ ಶುಭ ಹಾರೈಕೆ

Last Updated 4 ಅಕ್ಟೋಬರ್ 2020, 12:26 IST
ಅಕ್ಷರ ಗಾತ್ರ

ಕಾರವಾರ: ಭಾರತೀಯ ಸೇನೆಯಲ್ಲಿ 19 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಯೋಧ, ಚೆಂಡಿಯಾದ ಭಜನಕೇರಿಯ ದೀಪಕ್ ಪಾಂಡುರಂಗ ಗೌಡ ಅವರನ್ನು ಗ್ರಾಮಸ್ಥರು ಭಾನುವಾರ ಅಭಿಮಾನ ಪೂರ್ವಕವಾಗಿ ಸ್ವಾಗತಿಸಿದರು.

ಅವರು ಸೆ.30ರಂದು ನಿವೃತ್ತಿ ಹೊಂದಿದ್ದು, ಭಾನುವಾರ ತಮ್ಮ ಊರಿಗೆ ಮರಳಿದರು. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಅಸ್ಸಾಂ, ದೆಹಲಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.

ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ತೋಡೂರಿಗೆ ಅವರು ತಲುಪಿದಾಗ ತಂದೆ ಪಾಂಡುರಂಗ ಹಾಗೂ ತಾಯಿ ಗಂಗಾಬಾಯಿ ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಇದೇವೇಳೆ, ಗ್ರಾಮದ ಯುವಕರು ದೀಪಕ್ ಅವರನ್ನು ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಧನಾ ಪಿ.ಚೆಂಡೇಕರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ತೋಡೂರಿನ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಮಂಡಳಿ, ಭಜನಕೇರಿಯ ಸಣ್ಣಮ್ಮ ಯುವಕ ಮಂಡಳ, ಮಹಾದೇವ ಯುವಕ ಮಂಡಳಿ, ತೋಡೂರಿನ ಒಕ್ಕಲಕೇರಿ ಗೆಳೆಯರ ಬಳಗ, ರಾಯಲ್ ಫ್ರೆಂಡ್ಸ್, ಜಿಲ್ಲಾ ಹಾಲಕ್ಕಿ ಯುವ ಬಳಗ, ಬಂಟದೇವ ಯುವಕ ಮಂಡಳಿಯ ಸದಸ್ಯರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT