<p><strong>ಯಲ್ಲಾಪುರ</strong>: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬೇಡ್ತಿ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿ, ಕಸ, ಕಡ್ಡಿ ಸಂಗ್ರಹವಾಗಿದೆ. ಭಾರಿತೂಕದ ದಿಮ್ಮಿಗಳು ಅಪ್ಪಳಿಸಿದ ಕಾರಣ ಗೇಟ್ಗಳಿಗೆ ಹಾನಿಯಾಗಿದೆ.</p>.<p>ರಭಸದಿಂದ ನೀರು ಬಂದಾಗ ಅಣೆಕಟ್ಟೆಯಗೇಟ್ಗಳನ್ನುತೆರೆಯದ ಕಾರಣ ಸಮಸ್ಯೆಯಾಗಿದೆ.ಕಬ್ಬಿಣದ ಪ್ಲೇಟ್ಗಳನ್ನು ಸಕಾಲದಲ್ಲಿ ತೆರೆದಿದ್ದರೆ ಕಸ, ಕಡ್ಡಿ, ಮರದ ದಿಮ್ಮಿಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದುಧೀರಜ್ ತಿನೇಕರ್ ದೂರಿದ್ದಾರೆ.</p>.<p>ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ₹25 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗಿದೆ.ಯಲ್ಲಾಪುರದಿಂದ ಸುಮಾರು 16 ಕಿ.ಮೀದೂರದಲ್ಲಿರುವ ಬೇಡ್ತಿನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.</p>.<p>ಈ ಹಿಂದೆ ನೀರು ಪಾಚಿಗಟ್ಟಿ ಹಸಿರಾಗಿತ್ತು.ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಸೇತುವೆಯಿಂದಾಗಿ ನೀರಿನ ಹರಿವನ್ನು ತಡೆಯಲಾಗಿತ್ತು. ಆಗ ಪಟ್ಟಣಕ್ಕೆನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಕಿಂಡಿ ಅಣೆಕಟ್ಟಿನ ಹಿನ್ನೀರಿನಲ್ಲಿದ್ದ ಅಪರೂಪದ ಅರ್ಜುನ ಮರಗಳು ನಾಶವಾಗಿದ್ದವು. ಹೀಗೆ ಬೇಡ್ತಿ ಯೋಜನೆ ಸದಾ ಒಂದಿಲ್ಲೊಂದು ಕಾರಣದಿಂದಸುದ್ದಿಯಾಗುತ್ತಿರುವುದು ನಾಗರಿಕರಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.</p>.<p>‘ಗೇಟ್ಗಳು ಗಟ್ಟಿಯಾದ ಕಾರಣ ತೆರೆಯಲು ಸಾಧ್ಯವಾಗಿರಲಿಲ್ಲ. ನಂತರ ಮಳೆ ಆರಂಭವಾಯಿತು. ಮಳೆ ಕಡಿಮೆಯಾದರೆ ಸೋಮವಾರದಿಂದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ’ ಎಂದು ನೀರು ಸರಬರಾಜು ಇಲಾಖೆಯ ಮೇಲ್ವಿಚಾರಕ ಸುರೇಶ್ ತುಳಸೀಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬೇಡ್ತಿ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿ, ಕಸ, ಕಡ್ಡಿ ಸಂಗ್ರಹವಾಗಿದೆ. ಭಾರಿತೂಕದ ದಿಮ್ಮಿಗಳು ಅಪ್ಪಳಿಸಿದ ಕಾರಣ ಗೇಟ್ಗಳಿಗೆ ಹಾನಿಯಾಗಿದೆ.</p>.<p>ರಭಸದಿಂದ ನೀರು ಬಂದಾಗ ಅಣೆಕಟ್ಟೆಯಗೇಟ್ಗಳನ್ನುತೆರೆಯದ ಕಾರಣ ಸಮಸ್ಯೆಯಾಗಿದೆ.ಕಬ್ಬಿಣದ ಪ್ಲೇಟ್ಗಳನ್ನು ಸಕಾಲದಲ್ಲಿ ತೆರೆದಿದ್ದರೆ ಕಸ, ಕಡ್ಡಿ, ಮರದ ದಿಮ್ಮಿಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದುಧೀರಜ್ ತಿನೇಕರ್ ದೂರಿದ್ದಾರೆ.</p>.<p>ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ₹25 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗಿದೆ.ಯಲ್ಲಾಪುರದಿಂದ ಸುಮಾರು 16 ಕಿ.ಮೀದೂರದಲ್ಲಿರುವ ಬೇಡ್ತಿನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.</p>.<p>ಈ ಹಿಂದೆ ನೀರು ಪಾಚಿಗಟ್ಟಿ ಹಸಿರಾಗಿತ್ತು.ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಸೇತುವೆಯಿಂದಾಗಿ ನೀರಿನ ಹರಿವನ್ನು ತಡೆಯಲಾಗಿತ್ತು. ಆಗ ಪಟ್ಟಣಕ್ಕೆನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಕಿಂಡಿ ಅಣೆಕಟ್ಟಿನ ಹಿನ್ನೀರಿನಲ್ಲಿದ್ದ ಅಪರೂಪದ ಅರ್ಜುನ ಮರಗಳು ನಾಶವಾಗಿದ್ದವು. ಹೀಗೆ ಬೇಡ್ತಿ ಯೋಜನೆ ಸದಾ ಒಂದಿಲ್ಲೊಂದು ಕಾರಣದಿಂದಸುದ್ದಿಯಾಗುತ್ತಿರುವುದು ನಾಗರಿಕರಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.</p>.<p>‘ಗೇಟ್ಗಳು ಗಟ್ಟಿಯಾದ ಕಾರಣ ತೆರೆಯಲು ಸಾಧ್ಯವಾಗಿರಲಿಲ್ಲ. ನಂತರ ಮಳೆ ಆರಂಭವಾಯಿತು. ಮಳೆ ಕಡಿಮೆಯಾದರೆ ಸೋಮವಾರದಿಂದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ’ ಎಂದು ನೀರು ಸರಬರಾಜು ಇಲಾಖೆಯ ಮೇಲ್ವಿಚಾರಕ ಸುರೇಶ್ ತುಳಸೀಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>