‘ಬೆಂಗಳೂರು, ಮುಂಬೈ, ಪುಣೆ, ಗೋಕರ್ಣ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಶಿರಸಿ ಸೇರಿದಂತೆ ಬೇರೆ ಕಡೆಗಳಿಂದ ಗೋಮಯ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ದಿನವೊಂದಕ್ಕೆ 300ರಿಂದ 350 ಹಣತೆಗಳನ್ನು ತಯಾರಿಸಲಾಗುತ್ತಿದೆ. ಹಣತೆಯು ದೀಪದೊಂದಿಗೆ ಉರಿದು ವಾತಾವರಣ ಶುದ್ಧಗೊಳಿಸುತ್ತದೆ. ಹೂವಿನ ಕುಂಡ ಕ್ರಮೇಣ ಕರಗಿ ಗೊಬ್ಬರವಾಗುತ್ತದೆ. ಧೂಪದ ಕಡ್ಡಿ ಆರಿದ ನಂತರ ಅದರ ಬೂದಿಯನ್ನು ಗಾಯಕ್ಕೆ ಹಚ್ಚಿದರೆ ವಾಸಿಯಾಗುತ್ತದೆ’ ಎಂದು ಗಣೇಶ ಲಮಾಣಿ ವಿವರಿಸಿದರು.