<p><strong>ಮುಂಡಗೋಡ: ‘</strong>ಡೆಂಗಿ ಜ್ವರ ಹಾಗೂ ಕೋವಿಡ್ 19 ಸೋಂಕು ಖಚಿತಗೊಂಡಿದ್ದ ಪಟ್ಟಣದ 20 ವರ್ಷದ ಯುವಕನ ಗಂಟಲು ದ್ರವದ ವರದಿಯು ಶನಿವಾರ, ನೆಗೆಟಿವ್ ಬಂದಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.</p>.<p>ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿರದ ಯುವಕನಲ್ಲಿ ಕಳೆದ ಸೋಮವಾರ ‘ಡೆಂಗಿ’ ದೃಢಗೊಂಡಿತ್ತು. ಅಲ್ಲದೇ ಕೋವಿಡ್ ವರದಿಯಲ್ಲಿ ಒಂದು ಸಲ ಪಾಸಿಟಿವ್, ಮತ್ತೊಂದು ಸಲ ನೆಗೆಟಿವ್ ಬಂದಿತ್ತು. ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದರು.</p>.<p>ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿಲ್ಲ. ಅಲ್ಲದೇ ಯುವಕ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಯುವಕನ ಮಾದರಿಯನ್ನು ಬೆಂಗಳೂರಿಗೆ ಕಳಿಸಿ, ವರದಿ ಬರುವರೆಗೂ ಇಲ್ಲಿನ ತಾಲ್ಲೂಕುಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದರು.</p>.<p>ಯುವಕನಲ್ಲಿ ಸೋಂಕು ಖಚಿತ ಎಂದು ವರದಿ ಬಂದ ಕಾರಣ ಪಟ್ಟಣವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು, ತಜ್ಞವೈದ್ಯರ ಸಲಹೆ ಪಡೆದು, ಗಂಟಲುದ್ರವದ ಮಾದರಿಯನ್ನು ಮತ್ತೊಂದು ಸಲ ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ: ‘</strong>ಡೆಂಗಿ ಜ್ವರ ಹಾಗೂ ಕೋವಿಡ್ 19 ಸೋಂಕು ಖಚಿತಗೊಂಡಿದ್ದ ಪಟ್ಟಣದ 20 ವರ್ಷದ ಯುವಕನ ಗಂಟಲು ದ್ರವದ ವರದಿಯು ಶನಿವಾರ, ನೆಗೆಟಿವ್ ಬಂದಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.</p>.<p>ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿರದ ಯುವಕನಲ್ಲಿ ಕಳೆದ ಸೋಮವಾರ ‘ಡೆಂಗಿ’ ದೃಢಗೊಂಡಿತ್ತು. ಅಲ್ಲದೇ ಕೋವಿಡ್ ವರದಿಯಲ್ಲಿ ಒಂದು ಸಲ ಪಾಸಿಟಿವ್, ಮತ್ತೊಂದು ಸಲ ನೆಗೆಟಿವ್ ಬಂದಿತ್ತು. ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದರು.</p>.<p>ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿಲ್ಲ. ಅಲ್ಲದೇ ಯುವಕ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಯುವಕನ ಮಾದರಿಯನ್ನು ಬೆಂಗಳೂರಿಗೆ ಕಳಿಸಿ, ವರದಿ ಬರುವರೆಗೂ ಇಲ್ಲಿನ ತಾಲ್ಲೂಕುಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದರು.</p>.<p>ಯುವಕನಲ್ಲಿ ಸೋಂಕು ಖಚಿತ ಎಂದು ವರದಿ ಬಂದ ಕಾರಣ ಪಟ್ಟಣವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು, ತಜ್ಞವೈದ್ಯರ ಸಲಹೆ ಪಡೆದು, ಗಂಟಲುದ್ರವದ ಮಾದರಿಯನ್ನು ಮತ್ತೊಂದು ಸಲ ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>