‘ಮೃತ ಪರೇಶ್ ಮೇಸ್ತ ಅವರ ಕುಟುಂಬ ಬಡತನದಲ್ಲಿದೆ ಎಂದು ಅವರ ಮನೆಯವರೆಗೆ ಹೋಗಿ ವೈಯಕ್ತಿಕವಾಗಿ ಹಣ ನೀಡಿದ್ದೆ. ಆದರೆ, ಕೆಲ ಕಿಡಿಗೇಡಿಗಳು ಅವರನ್ನು ತಪ್ಪು ಕಲ್ಪನೆಗಳನ್ನು ಮೂಡಿಸಿ, ಅದನ್ನು ವಾಪಾಸ್ಸು ಮಾಡಿಸಿದ್ದಾರೆ. ಸರ್ಕಾರದಿಂದ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ಅದು ಮಂಜೂರಿಯಾದರೆ ಅದನ್ನೂ ಕೂಡ ಕುಟುಂಬ ತಿರಸ್ಕರಿಸುವುದೇನೋ ಎಂಬ ಭಯ ನನಗಿದೆ’ ಎಂದು ಹೇಳಿದರು.