ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಕಾರವಾರ: ಹೊಸ ಪುಸ್ತಕಗಳಿಲ್ಲದ ಗ್ರಾಮೀಣ ಗ್ರಂಥಾಲಯ

ಮೂಲಸೌಕರ್ಯ ಕೊರತೆ, ಇಕ್ಕಟ್ಟಾದ ಜಾಗದಲ್ಲಿ ಓದುವ ಅನಿವಾರ್ಯತೆ
Published : 10 ಫೆಬ್ರುವರಿ 2025, 5:33 IST
Last Updated : 10 ಫೆಬ್ರುವರಿ 2025, 5:33 IST
ಫಾಲೋ ಮಾಡಿ
Comments
ಶಿರಸಿ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ಗ್ರಂಥಾಲಯ
ಶಿರಸಿ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ಗ್ರಂಥಾಲಯ
ಗ್ರಾಮೀಣ ಗ್ರಂಥಾಲಯಗಳು ಓದಲು ಅನುಕೂಲ ಮಾಡಿಕೊಡುವ ಜೊತೆಗೆ ಸರ್ಕಾರಿ ಯೋಜನೆಗಳ ಮಾಹಿತಿ ನೀಡುವ ಅರಿವು ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುತ್ತಿದೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ಓದುಗರು ಅಪೇಕ್ಷೆಪಟ್ಟ ಪುಸ್ತಕಗಳನ್ನು ತರಿಸಲು ಅನುಕೂವಾಗುವಂತೆ ಗ್ರಂಥಾಲಯಗಳಿಗೆ ಅನುದಾನ ನೀಡಬೇಕು. ಆಗ ಓದುಗರ ಆದ್ಯತೆಯ ಪುಸ್ತಕ ತರಿಸಬಹುದು
ದತ್ತಾತ್ರೇಯ ಕಣ್ಣಿಪಾಲ ವಜ್ರಳ್ಳಿಯ ಗ್ರಂಥಪಾಲಕ
ಗ್ರಂಥಾಲಯದಲ್ಲಿ ಅಗತ್ಯ ವ್ಯವಸ್ಥೆಗಳಿವೆ. ಆದರೆ ಸ್ಥಳ ತೀರಾ ಚಿಕ್ಕದಾಗಿದೆ. ಗ್ರಾಮ ಪಂಚಾಯಿತಿ ಬೇರೆ ಸ್ಥಳದಲ್ಲಿ ಅನುಕೂಲ ಕಲ್ಪಿಸಿದರೆ ಅನುಕೂಲ ಎಂಬುದು ಓದುಗರ ಅಭಿಪ್ರಾಯ
ಹರ್ಷ ಬೋಮಕರ್ ಗೋಕರ್ಣ ಗ್ರಂಥಾಲಯದ ಮೇಲ್ವಿಚಾರಕ
ಹೊನ್ನಾವರ ಪಟ್ಟಣ ಪಂಚಾಯಿತಿ ಆವಾರದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಾಲಯ ಕೈ ತೊಳೆಯಲು ಬೇಸಿನ್ ಇದ್ದರೆ ಓದುಗರಿಗೆ ಅನುಕೂಲ ಆಗುತ್ತದೆ
ದಿನೇಶ ಕಾಮತ್ ಹೊನ್ನಾವರ ರೋಟರಿ ಕ್ಲಬ್ ಹಿರಿಯ ಸದಸ್ಯ
1700ಕ್ಕೂ ಹೆಚ್ಚು ಓದುಗ ಸದಸ್ಯರು
ಹಳಿಯಾಳ ಪಟ್ಟಣದಲ್ಲಿರುವ ಗ್ರಂಥಾಲಯ ಸ್ವಂತ ಸುಸಜ್ಜಿತ ಕಟ್ಟಡ ಹೊಂದಿದೆ. 1700ಕ್ಕೂ ಹೆಚ್ಚು ಓದುಗ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಕ್ಕಳಿಗಾಗಿಯೇ ಅಂದಾಜು ₹20 ಲಕ್ಷ ವೆಚ್ಚದಿಂದ ಮಕ್ಕಳ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ‘ಪುರಸಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಅಗತ್ಯವಿರುವ ಪುಸ್ತಕಗಳನ್ನು ಶಾಸಕ ಆರ್‌.ವಿ.ದೇಶಪಾಂಡೆ ಅವರ ವಿ.ಆರ್.ಡಿ.ಎಂ ಟ್ರಸ್ಟ್ ವತಿಯಿಂದ 12 ರ‍್ಯಾಕ್‍ಗಳನ್ನು ದೇಣಿಗೆಯಾಗಿ ನೀಡಲಾಗಿದೆ’ ಎಂದು ಗ್ರಂಥಾಲಯದ ಸಿಬ್ಬಂದಿ ವಿಷ್ಣು ಮಾಚಕ್ ಹೇಳುತ್ತಾರೆ. ‘ತಾಲ್ಲೂಕು ಕೇಂದ್ರದ ಗ್ರಂಥಾಲಯದಲ್ಲಿ ಸಿಬ್ಬಂದಿ ಕೊರತೆ ಇದ್ದು ಈಗಾಗಲೇ ನಿಯೋಜನೆಗೊಂಡ ಸಿಬ್ಬಂದಿ ತಾತ್ಕಾಲಿಕ ನಿಯೋಜನೆ ಮೇರೆಗೆ ಇದ್ದಾರೆ’ ಎಂದು ಗ್ರಂಥಾಲಯದ ಸಲಹಾ ಸಮಿತಿ ಸದಸ್ಯ ಸತ್ಯಜಿತ ಗಿರಿ ಹೇಳುತ್ತಾರೆ.
ಡಿಜಿಟಲ್ ಗ್ರಂಥಾಲಯಕ್ಕೆ ನೆಟ್‍ವರ್ಕ್ ಸಮಸ್ಯೆ
ಜೊಯಿಡಾ ತಾಲ್ಲೂಕಿನ ನಾಗೋಡಾ ಅಣಶಿ ಆಖೇತಿಯಲ್ಲಿ ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡಗಳಿಲ್ಲದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಂಥಾಲಯವನ್ನು ನಡೆಸಲಾಗುತ್ತಿದೆ. ನಂದಿಗದ್ದಾ ಅಣಶಿ ನಾಗೋಡಾ ಕಾತೇಲಿ ಗಾಂಗೋಡಾ ಆಖೇತಿ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಇಲ್ಲ. ನಾಗೋಡಾ ಗ್ರಂಥಾಲಯವನ್ನು ಬಾಪೇಲಿ ಕ್ರಾಸ್ ಆಖೇತಿ ಗ್ರಂಥಾಲಯವನ್ನು ಅನಮೋಡ ಮತ್ತು ಆವೇಡಾ ಗ್ರಂಥಾಲಯವನ್ನು ಗಣೇಶಗುಡಿ ಕೆಪಿಸಿ ಶಾಲೆಗಳಿಗೆ ಸ್ಥಳಾಂತರಿಸಿ ನಡೆಸಲಾಗುತ್ತಿದೆ. ‘ರಾಮನಗರದಲ್ಲಿ ಅಂಗವಿಕಲ ಸ್ನೇಹಿ ಗ್ರಂಥಾಲಯ ಪ್ರಾರಂಭಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಜೀರ್ ಸಾಬ್ ಅಕ್ಕಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT