<p><strong>ಗೋಕರ್ಣ</strong>: ‘ಗೋಕರ್ಣ ಪವಿತ್ರವಾದ ಆಧ್ಯಾತ್ಮ್ಮಿಕ ಕ್ಷೇತ್ರ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ನನಗೆ ಪೇರೇಪಿಸುತ್ತಿದೆ. ಇದು ನನ್ನ ಮತ್ತೊಂದು ತಾಯ್ನಾಡು’ ಎಂದು ನಿರಂತರ 50 ವರ್ಷದಿಂದ ಗೋಕರ್ಣಕ್ಕೆ ಬರುತ್ತಿದ್ದ ಇಂಗ್ಲೆಂಡ್ ಮಹಿಳೆ ಅಂತೋನಿಯಾ ಚೆಟ್ವಿಂಡ್ ಭಾವುಕರಾಗಿ ಹೇಳಿದರು.</p>.<p>ಇಲ್ಲಿನ ಕುಡ್ಲೆ ಕಡಲತೀರದಲ್ಲ ಗುರುವಾರ ಹಿತೈಷಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೆಸಾರ್ಟ್ ಮಾಲೀಕ ಪರಮೇಶ್ವರ ಶಾಸ್ತ್ರಿ ಈ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.</p>.<p>‘ನನಗೆ ಈಗ 91 ವಯಸ್ಸು. 1976ರ ಮಹಾಶಿವರಾತ್ರಿಯಲ್ಲಿ ಮೊದಲ ಬಾರಿಗೆ ಗೋಕರ್ಣಕ್ಕೆ ಬಂದೆ. ನನ್ನ ಜೊತೆ 5 ಜನ ವಿದೇಶಿ ಸಂಗೀತಗಾರರೂ ಬಂದಿದ್ದರು. ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರವೇಶಿಸಿ ಆತ್ಮಲಿಂಗದ ದರ್ಶನವನ್ನೂ ಪಡೆದಿದ್ದೆ. ಆಗ ವಿದೇಶಿಯರಿಗೆ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ದರ್ಶನಕ್ಕೆ ಅವಕಾಶವಿತ್ತು. ಅದು ನನ್ನ ಜೀವನದ ದೊಡ್ಡ ಭಾಗ್ಯ’ ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.</p>.<p>‘ಇಲ್ಲಿ ಧಾರ್ಮಿಕತೆ ಹಾಗೂ ಆಧುನಿಕತೆ ಎರಡೂ ಕೂಡಿಕೊಂಡಿರುವುದರಿಂದ ಆಕರ್ಷಣೆಗೆ ಒಳಪಡಲು ಕಾರಣವಾಯಿತು. ನೈಸರ್ಗಿಕವಾಗಿ ಬರುವ ರಾಮತೀರ್ಥದಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದು ಪ್ರತಿ ನಿತ್ಯದ ಕಾಯಕವಾಗಿಸಿಕೊಂಡಿದ್ದೆ. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ. ಆದರೂ ಗೋಕರ್ಣ ತುಂಬಾ ಮೆಚ್ಚಿನ ಪ್ರದೇಶ’ ಎಂದರು. </p>.<p>ಸುಮಾರು 50 ರಷ್ಟು ವಿದೇಶಿಯರೂ ಸೇರಿದಂತೆ ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ರಾಮಚಂದ್ರ ನಿರ್ವಾಣೇಶ್ವರ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ</strong>: ‘ಗೋಕರ್ಣ ಪವಿತ್ರವಾದ ಆಧ್ಯಾತ್ಮ್ಮಿಕ ಕ್ಷೇತ್ರ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ನನಗೆ ಪೇರೇಪಿಸುತ್ತಿದೆ. ಇದು ನನ್ನ ಮತ್ತೊಂದು ತಾಯ್ನಾಡು’ ಎಂದು ನಿರಂತರ 50 ವರ್ಷದಿಂದ ಗೋಕರ್ಣಕ್ಕೆ ಬರುತ್ತಿದ್ದ ಇಂಗ್ಲೆಂಡ್ ಮಹಿಳೆ ಅಂತೋನಿಯಾ ಚೆಟ್ವಿಂಡ್ ಭಾವುಕರಾಗಿ ಹೇಳಿದರು.</p>.<p>ಇಲ್ಲಿನ ಕುಡ್ಲೆ ಕಡಲತೀರದಲ್ಲ ಗುರುವಾರ ಹಿತೈಷಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೆಸಾರ್ಟ್ ಮಾಲೀಕ ಪರಮೇಶ್ವರ ಶಾಸ್ತ್ರಿ ಈ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.</p>.<p>‘ನನಗೆ ಈಗ 91 ವಯಸ್ಸು. 1976ರ ಮಹಾಶಿವರಾತ್ರಿಯಲ್ಲಿ ಮೊದಲ ಬಾರಿಗೆ ಗೋಕರ್ಣಕ್ಕೆ ಬಂದೆ. ನನ್ನ ಜೊತೆ 5 ಜನ ವಿದೇಶಿ ಸಂಗೀತಗಾರರೂ ಬಂದಿದ್ದರು. ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರವೇಶಿಸಿ ಆತ್ಮಲಿಂಗದ ದರ್ಶನವನ್ನೂ ಪಡೆದಿದ್ದೆ. ಆಗ ವಿದೇಶಿಯರಿಗೆ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ದರ್ಶನಕ್ಕೆ ಅವಕಾಶವಿತ್ತು. ಅದು ನನ್ನ ಜೀವನದ ದೊಡ್ಡ ಭಾಗ್ಯ’ ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.</p>.<p>‘ಇಲ್ಲಿ ಧಾರ್ಮಿಕತೆ ಹಾಗೂ ಆಧುನಿಕತೆ ಎರಡೂ ಕೂಡಿಕೊಂಡಿರುವುದರಿಂದ ಆಕರ್ಷಣೆಗೆ ಒಳಪಡಲು ಕಾರಣವಾಯಿತು. ನೈಸರ್ಗಿಕವಾಗಿ ಬರುವ ರಾಮತೀರ್ಥದಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದು ಪ್ರತಿ ನಿತ್ಯದ ಕಾಯಕವಾಗಿಸಿಕೊಂಡಿದ್ದೆ. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ. ಆದರೂ ಗೋಕರ್ಣ ತುಂಬಾ ಮೆಚ್ಚಿನ ಪ್ರದೇಶ’ ಎಂದರು. </p>.<p>ಸುಮಾರು 50 ರಷ್ಟು ವಿದೇಶಿಯರೂ ಸೇರಿದಂತೆ ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ರಾಮಚಂದ್ರ ನಿರ್ವಾಣೇಶ್ವರ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>