ಅವರ ಮನೆಗೆ ಕಾಲಿಟ್ಟರೆ ಬಿದಿರಿನ ಕಡ್ಡಿಗಳ ರಾಶಿ ಕಾಣಸಿಗುತ್ತದೆ. ಜತೆಗೆ ಅವುಗಳಿಂದ ತಯಾರಾದ ಬಗೆ ಬಗೆಯ ಕಲಾಕೃತಿಗಳೂ ಮನಸೆಳೆಯುತ್ತವೆ. ಅಮೃತಸರದ ಸ್ವರ್ಣ ಮಂದಿರ, ಮುಂಬೈನ ಗೇಟ್ ವೇ ಆಫ್ ಇಂಡಿಯಾ, ಅಯೋಧ್ಯೆಯ ರಾಮಮಂದಿರ, ಆಗ್ರಾದ ತಾಜ್ಮಹಲ್ ಹೀಗೆ ವಿಖ್ಯಾತ ತಾಣಗಳ ಮಾದರಿಯನ್ನೇ ಅವರು ಸಿದ್ಧಪಡಿಸುವುದು ಹೆಚ್ಚು.