ತಾವು ಸ್ವತಃ ಸಂಶೋಧನಾ ಪ್ರಬಂಧ ಬರೆದಿರುವ ಜೊತೆಗೆ ವಿದ್ಯಾರ್ಥಿಗಳ ಇಂಥ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ‘ಪ್ರಿಯ ಶರಾವತಿ’, ‘ದಿನಕರ ದೇಸಾಯಿ ಬದುಕು– ಬರಹ’, ‘ನಿಸರ್ಗ ಜಲಪಾತಗಳು’, ‘ಕಡಲ ಒಡಲಿನಲಿ ಮುತ್ತು ಬಿತ್ತು’, ‘ಮೌನ ಕಣಿವೆಯ ಒಡಲು’, ‘ಸುವರ್ಣ ಜಾನಪದ ಲೇಖನಗಳು’, ‘ಹೊಸಗನ್ನಡ ಕಾವ್ಯ ಸಂಚಯ’, ‘ಆಲಯಗಳ ಬಯಲು’ ಮೊದಲಾದ ವಿಭಿನ್ನ ವಸ್ತುಗಳನ್ನೊಳಗೊಂಡ ಕೃತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಇವರದ್ದು.