ನವೀನ ಮಾದರಿಯ ವಿವಿಧೋದ್ದೇಶ ಅಸ್ತ್ರ ಒಲೆ, ಬಡವರ ಭಾಗ್ಯಜ್ಯೋತಿ, ಬಹುಪಯೋಗಿ ಸೌರ ಜಲತಾಪಕ, ಮಿತ ಇಂಧನ ದೀಪ ಮೊದಲಾದ ವಿಜ್ಞಾನ ಮಾದರಿಗಳು ರಾಜ್ಯ ಮಟ್ಟದ ಬಹುಮಾನ ಗಳಿಸಿವೆ. ಶಾಲೆಗೆ ಸೇರಿದ್ದ ಮೂವರು ಚಿಂದಿ ಆಯುವ ಮಕ್ಕಳನ್ನು ಬಳಸಿಕೊಂಡು ಸಿದ್ಧಪಡಿಸಿದ ಮಾದರಿಗೆ ರಾಷ್ಟ್ರ ಮಟ್ಟದ ಬಹುಮಾನ ದೊರೆತಿದೆ. ಮೂರು ವಿನೂತನ ಮಾದರಿ ಸಿದ್ಧಪಡಿಸಿದ ಕಾರಣಕ್ಕೆ ‘ಸಿ.ಎನ್.ಆರ್ ರಾವ್ ಬೆಸ್ಟ್ ಟೀಚರ್’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ರಾಜೀವಗಾಂಧಿ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಬಸವಶ್ರೀ ಕಾಯಕ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ.