ಪ್ರಶಸ್ತಿಯು ₹10 ಸಾವಿರ ನಗದು, ಮುದ್ರಿತ ಕಥಾ ಸಂಕಲನದ ಪ್ರತಿಗಳನ್ನು ಒಳಗೊಂಡಿರಲಿದೆ. ಬೀರಣ್ಣ ನಾಯಕ ಮೊಗಟಾ ಅವರ ‘ಹಣ್ಮರ’ ದ್ವಿತೀಯ ಮತ್ತು ಮಲ್ಲಮ್ಮ ಜೊಂಡಿ ಅವರ ‘ಗೌಡ ಶ್ಯಾನಿ’ ಕಥಾ ಸಂಕಲನ ತೃತೀಯ ಸ್ಥಾನಗಳಿಸಿವೆ. ನಾಗಪತಿ ಹೆಗಡೆ ಹುಳಗೋಳ ಅವರ ‘ಕಡಲ ಒಡಲ ಮುತ್ತುಗಳು’ ಕಥಾ ಸಂಕಲನ ಸಮಾಧಾನಕರ ಬಹುಮಾನ ಪಡೆದಿದೆ.