ಆದರೆ, ಭಾನುವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ನಗರಸಭೆ ಕಡಲತೀರ ಸ್ವಚ್ಛಗೊಳಿಸುವ ನೆಪದಲ್ಲಿ ಸುಮಾರು 30 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿಕೊಂಡಿದ್ದ ಬಂಗಡೆ ಬಳ್ಳಿಯನ್ನು ತೆರವುಗೊಳಿಸಿದೆ. ಇದಕ್ಕೆ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಬಳ್ಳಿ ಇದ್ದ ಜಾಗದಿಂದ ಸ್ವಲ್ಪವೇ ಅಂತರದವರೆಗೂ ಅಲೆಗಳು ಅಪ್ಪಳಿಸುತ್ತಿದ್ದು ಮರಳಿನ ಸವಕಳಿ ಉಂಟಾಗುತ್ತಿದೆ.