<p><strong>ಯಲ್ಲಾಪುರ:</strong> ‘ಅಡಿಕೆ ಬೆಳೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ ರೋಗಬಾಧೆಯಿಂದ ರೈತರು ಕಂಗಾಲಾಗುತ್ತಿದ್ದಾರೆ’ ಎಂದು ಶಿರಸಿಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ. ಸತೀಶ ಹೇಳಿದರು.</p>.<p>ತೋಟಗಾರಿಕಾ ಇಲಾಖೆ, ಶ್ರೀದೇವಿ ಸೇವಾ ರೈತ ಉತ್ಪಾದಕ ಕಂಪನಿ ಮತ್ತು ಮಾವಿನಮನೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತಾಲ್ಲೂಕಿನ ಮಲವಳ್ಳಿಯ ಸಭಾಭವನದಲ್ಲಿ ಸೋಮವಾರ ನಡೆದ ರೈತ ಸಮಾವೇಶ ಹಾಗೂ ಎಲೆಚುಕ್ಕಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದೊಂದಿಗೆ ರೈತರು ವಾಣಿಜ್ಯ ಬೆಳೆ ಮತ್ತು ಸಾಂಪ್ರದಾಯಿಕ ಬೆಳೆ ಎರಡನ್ನೂ ಉಳಿಸಿಕೊಂಡು ಹೋಗಬಹುದಾಗಿದೆ. ಅಡಿಕೆಗೆ ಪರ್ಯಾಯ ಬೆಳೆಯಾಗಿ ತಾಳೆಯನ್ನು ಬೆಳೆಯಬಹುದು’ ಎಂದರು.</p>.<p>ಶ್ರೀದೇವಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕರ ಅಧ್ಯಕ್ಷತೆ ವಹಿಸಿ, ‘ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಬೇಕು. ಪರಾಂಪರಾಗತ ಕೃಷಿಯನ್ನೂ ಉಳಿಸಿಕೊಂಡು ಹೋಗಬೇಕು’ ಎಂದರು.</p>.<p>ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ, ಮಾವಿನಮನೆ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಕೃಷಿತಜ್ಞ ರವಿ ಭಟ್ಟ ಮಾತನಾಡಿದರು.</p>.<p>ಪ್ರಮುಖರಾದ ರವಿ ಹುಳ್ಸೆ, ಸದಾನಂದ ಭಟ್, ಸುಬ್ಬಯ್ಯ ಧೊಗಳೆ, ಅಕ್ಷಯ ಗಾಂವ್ಕರ, ಮಾಬ್ಲೇಶ್ವರ ಭಟ್, ಗಣಪತಿ ಮುದ್ದೇಪಾಲ, ಎನ್.ಕೆ. ಭಟ್ ಮೆಣಸುಪಾಲ, ಗಜಾನನ ಭಟ್ ಕಳಚೆ, ನಾಗರಾಜ ಭಟ್ ಚಿಮ್ನಳ್ಳಿ ಇದ್ದರು.</p>.<div><blockquote>ಜಿಲ್ಲೆಯಲ್ಲಿ ಜೇನು ಕೃಷಿ ತಾಳೆ ಕೃಷಿ ಭತ್ತ ಬೆಳೆಗೆ ಉತ್ತಮ ವಾತಾವರಣವಿದೆ. ರೈತರು ಇದನ್ನು ಬಳಸಿಕೊಳ್ಳಬೇಕು </blockquote><span class="attribution">ರೂಪಾ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ:</strong> ‘ಅಡಿಕೆ ಬೆಳೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ ರೋಗಬಾಧೆಯಿಂದ ರೈತರು ಕಂಗಾಲಾಗುತ್ತಿದ್ದಾರೆ’ ಎಂದು ಶಿರಸಿಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ. ಸತೀಶ ಹೇಳಿದರು.</p>.<p>ತೋಟಗಾರಿಕಾ ಇಲಾಖೆ, ಶ್ರೀದೇವಿ ಸೇವಾ ರೈತ ಉತ್ಪಾದಕ ಕಂಪನಿ ಮತ್ತು ಮಾವಿನಮನೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತಾಲ್ಲೂಕಿನ ಮಲವಳ್ಳಿಯ ಸಭಾಭವನದಲ್ಲಿ ಸೋಮವಾರ ನಡೆದ ರೈತ ಸಮಾವೇಶ ಹಾಗೂ ಎಲೆಚುಕ್ಕಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದೊಂದಿಗೆ ರೈತರು ವಾಣಿಜ್ಯ ಬೆಳೆ ಮತ್ತು ಸಾಂಪ್ರದಾಯಿಕ ಬೆಳೆ ಎರಡನ್ನೂ ಉಳಿಸಿಕೊಂಡು ಹೋಗಬಹುದಾಗಿದೆ. ಅಡಿಕೆಗೆ ಪರ್ಯಾಯ ಬೆಳೆಯಾಗಿ ತಾಳೆಯನ್ನು ಬೆಳೆಯಬಹುದು’ ಎಂದರು.</p>.<p>ಶ್ರೀದೇವಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕರ ಅಧ್ಯಕ್ಷತೆ ವಹಿಸಿ, ‘ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಬೇಕು. ಪರಾಂಪರಾಗತ ಕೃಷಿಯನ್ನೂ ಉಳಿಸಿಕೊಂಡು ಹೋಗಬೇಕು’ ಎಂದರು.</p>.<p>ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ, ಮಾವಿನಮನೆ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಕೃಷಿತಜ್ಞ ರವಿ ಭಟ್ಟ ಮಾತನಾಡಿದರು.</p>.<p>ಪ್ರಮುಖರಾದ ರವಿ ಹುಳ್ಸೆ, ಸದಾನಂದ ಭಟ್, ಸುಬ್ಬಯ್ಯ ಧೊಗಳೆ, ಅಕ್ಷಯ ಗಾಂವ್ಕರ, ಮಾಬ್ಲೇಶ್ವರ ಭಟ್, ಗಣಪತಿ ಮುದ್ದೇಪಾಲ, ಎನ್.ಕೆ. ಭಟ್ ಮೆಣಸುಪಾಲ, ಗಜಾನನ ಭಟ್ ಕಳಚೆ, ನಾಗರಾಜ ಭಟ್ ಚಿಮ್ನಳ್ಳಿ ಇದ್ದರು.</p>.<div><blockquote>ಜಿಲ್ಲೆಯಲ್ಲಿ ಜೇನು ಕೃಷಿ ತಾಳೆ ಕೃಷಿ ಭತ್ತ ಬೆಳೆಗೆ ಉತ್ತಮ ವಾತಾವರಣವಿದೆ. ರೈತರು ಇದನ್ನು ಬಳಸಿಕೊಳ್ಳಬೇಕು </blockquote><span class="attribution">ರೂಪಾ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>