ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ಕಾಳಿಯಲ್ಲಿ ತೇಲುವ ಕಾಂಕ್ರೀಟ್ ಜಟ್ಟಿ

ಸಾಗರಮಾಲಾ ಯೋಜನೆಯಡಿ ಪ್ರವಾಸೋದ್ಯಮ ಉದ್ದೇಶಕ್ಕೆ ಅಳವಡಿಕೆ
Published : 20 ಜುಲೈ 2023, 19:56 IST
Last Updated : 20 ಜುಲೈ 2023, 19:56 IST
ಫಾಲೋ ಮಾಡಿ
Comments
ಸಾಗರಮಾಲಾ ಯೋಜನೆಯಡಿ ಪರಿಸರಸ್ನೇಹಿ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಕೆಗೆ ಉತ್ತರ ಕನ್ನಡದ ನಾಲ್ಕು ದಕ್ಷಿಣ ಕನ್ನಡ ಜಿಲ್ಲೆಯ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಅನುಮೋದನೆ ಸಿಕ್ಕಿದೆ. ಹಂತಹಂತವಾಗಿ ಕೆಲಸ ನಡೆಯಲಿದೆ.
–ಕ್ಯಾಪ್ಟನ್ ಸಿ.ಸ್ವಾಮಿ, ನಿರ್ದೇಶಕ ಬಂದರು ಮತ್ತು ಜಲಸಾರಿಗೆ ಮಂಡಳಿ
ಗೋವಾ ಗುಜರಾತ್‍ನ ಹಲವೆಡೆ ಪ್ರವಾಸಿ ತಾಣಗಳಲ್ಲಿ ಈಗಾಗಲೇ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಸಲಾಗಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಸೌಲಭ್ಯ ಪರಿಚಯಿಸಲಾಗಿದೆ.
–ಕಾಸ್ಮೆ ಡಿಸಿಲ್ವಾ, ಅಧಿಕಾರಿ ಮರೈನ್‍ಟೆಕ್ ಇಂಡಿಯಾ ಸರ್ವಿಸಸ್‌ ಕಂಪನಿ
ಏನಿದು ತೇಲುವ ಕಾಂಕ್ರೀಟ್ ಜಟ್ಟಿ?
‘ನದಿ ಅಥವಾ ಸಮುದ್ರದಲ್ಲಿ ದೋಣಿಗಳ ನಿಲುಗಡೆಗೆ ಅನುಕೂಲವಾಗುವಂತೆ ತಾತ್ಕಾಲಿಕ ಜಟ್ಟಿ ಸ್ಥಾಪಿಸಲು ಈ ಮೊದಲು ಅಧಿಕ ಸಾಂಧ್ರತೆಯ ಪಾಲಿಥಿನ್ (ಎಚ್‌ಡಿಪಿಇ) ಬಳಸಲಾಗುತ್ತಿತ್ತು. ಕಾಂಕ್ರೀಟ್ ಜಟ್ಟಿ ವಿಭಿನ್ನವಾದದ್ದು. ರಬ್ಬರ್ ತಳಹದಿಗೆ ಕಾಂಕ್ರೀಟ್ ಅಳವಡಿಸಿ ಸಮತಟ್ಟಾದ ಆಯತಾಕಾರದ ನೆಲಹಾಸು ರಚಿಸಲಾಗುತ್ತದೆ. ಅವುಗಳಿಗೆ ನಾಲ್ಕೂ ಕಡೆ ಆ್ಯಂಕರ್ ಜೋಡಿಸಿ ನೀರಿನಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ನೀರಿನ ಉಬ್ಬರ ಇಳಿತಕ್ಕೆ ತಕ್ಕಂತೆ ಅವೂ ಕೂಡ ಚಲನೆಯಾಗುತ್ತವೆ. ಇವು ದೋಣಿ ನಿಲುಗಡೆಗೆ ಅನುಕೂಲವಾಗುತ್ತವೆ’ ಎಂದು ಬಂದರು ಎಂಜಿನಿಯರ್ ಪಾಂಡುರಂಗ ಕುಲಕರ್ಣಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT