ಉದ್ಘಾಟನೆಗೊಂಡರೂ ಕಾಮಗಾರಿ ಬಾಕಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗದ ಮುಂಡಗೋಡದ ಸಾರಿಗೆ ಘಟಕ
ಶಿರಸಿಯ ಗಣೇಶಪಾಲ್ ಬಳಿ ಸೇತುವೆ ಕಾಮಗಾರಿ ಅರೆಬರೆ ಆಗಿರುವುದು
ಹಳಿಯಾಳದ ಸಾರಿಗೆ ಘಟಕದ ಹತ್ತಿರ ನೂತನವಾಗಿ ನಿರ್ಮಿಸಲಾಗುತ್ತಿರುವ ಖೇಲೋ ಇಂಡಿಯಾ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ

ಕಾಂಗ್ರೆಸ್ ಸರ್ಕಾರವೂ ಈ ಹಿಂದಿನಂತೆ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿವೆ
-ಸಂತೋಷ ನಾಯ್ಕ, ಭಟ್ಕಳ ಸಾಮಾಜಿಕ ಕಾರ್ಯಕರ್ತ
ಸಂತೆ ಮಾರುಕಟ್ಟೆ ಕಾಮಗಾರಿ ವಿಳಂಬದಿಂದ ಪ್ರತಿ ವಾರ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ರಾಜ್ಯ ಹೆದ್ದಾರಿ ಮೇಲೆ ಸಂತೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
-ಮಂಜುನಾಥ ಹರಮಲಕರ, ಮುಂಡಗೋಡ ಪಟ್ಟಣ ಪಂಚಾಯಿತಿ ಸದಸ್ಯ
ಗಂಗಾವಳಿ–ಮಂಜುಗುಣಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವಂತೆ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಒತ್ತಡ ಕಡಿಮೆಯಾಗಬಹುದು
-ವಿನೋದ ಗೌಡ, ಗೋಕರ್ಣ ವಾಹನ ಚಾಲಕ
ಖೇಲೋ ಇಂಡಿಯಾ ಹಾಗೂ ಸಮಾವೇಶ ಕೇಂದ್ರ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ತಾಲ್ಲೂಕಿನಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಮಸ್ಯೆ ಉಂಟಾಗುತ್ತಿದೆ
-ವಿ.ವಿ.ರೆಡ್ಡಿ ಹಳಿಯಾಳ, ವಕೀಲ