10ರಂದು ಬೆಳಿಗ್ಗೆ 9.30ಕ್ಕೆ ಅಶೋಕ ಹುಗ್ಗಣ್ಣವರ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ದಿನಕರ ಕೆ.ಶೆಟ್ಟಿ, ಕೆ.ಜೆ.ಮಳಗಿ, ಟಿಎಪಿಸಿಎಂಎಸ್ ಅಧ್ಯಕ್ಷ ದೀಪಕ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಅನಂತಮೂರ್ತಿ ಹೆಗಡೆ ಶಿರಸಿ ಭಾಗವಹಿಸುವರು. ಅಶೋಕ ಹುಗ್ಗಣ್ಣವರ, ನಾಟಿ ವೈದ್ಯ ಶೀನಪ್ಪ ಹಾಗೂ ಪಾರಂಪರಿಕ ವೈದ್ಯ ಚಿದಂಬರ ಭಾಗ್ವತ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.