<p><strong>ಮುಂಡಗೋಡ:</strong> ಸಾರ್ವಜನಿಕ ಅರ್ಜಿಗಳಿಗೆ ಬೇಗನೆ ಸ್ಪಂದಿಸಲು ಹಾಗೂ ತ್ವರಿತ ಕೆಲಸಗಳಿಗೆ ಇ-ಆಫೀಸ್ ನೆರವಾಗಲಿದ್ದು, ಸಿಬ್ಬಂದಿ ಕಾರ್ಯಕ್ಷಮತೆಯನ್ನು ಅಳೆಯಲೂ ಇದು ಸಹಾಯಕವಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಇ-ಆಫೀಸ್ ಉದ್ಘಾಟಿಸಿ ಮಾತನಾಡಿದರು.</p>.<p>ತಹಶೀಲ್ದಾರ್ ಶಂಕರ ಗೌಡಿ ಮಾತನಾಡಿ, ಸಾರ್ವಜನಿಕರು ಹಾಗೂ ವಿವಿಧ ಕಚೇರಿಗಳಿಂದ ಬರುವ ಅರ್ಜಿ, ಪತ್ರಗಳನ್ನು ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ(ಟಪಾಲು ವಿಭಾಗ) ಇ- ಆಫೀಸ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ಕಳಿಸಲಾಗುತ್ತದೆ. ನಂತರ ಇ-ಆಫೀಸ್ ಮೂಲಕವೇ ಶಿರಸ್ತೇದಾರ್ ಹಾಗೂ ತಹಶೀಲ್ದಾರ್ಗೆ ಬರುತ್ತದೆ. ಅನುಮೋದನೆ ಆದ ನಂತರ ಕಡತವು ಇ-ಆಫೀಸ್ ಮೂಲಕವೇ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಕಚೇರಿಗೆ ಹೋಗುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ಅನುಮೋದನೆಯಾದ ಪತ್ರ ಅಥವಾ ಆದೇಶವನ್ನು ಮುದ್ರಿಸಿ ಕಳಿಸಲಾಗುವುದು’ ಎಂದರು.</p>.<p>‘ಇದರಿಂದ ಸಮಯದ ಉಳಿತಾಯದೊಂದಿಗೆ ಕಾಗದ ರಹಿತ ಹಾಗೂ ಭೌತಿಕ ಕಡತಗಳ ಉಪಯೋಗ ಕಡಿಮೆಯಾಗುತ್ತದೆ. ಅರ್ಜಿಯ ಇ-ಸಂಖ್ಯೆಯ ಮೂಲಕವೇ ಸಂಬಂಧಿಸಿದ ಫೈಲ್ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೇಲಧಿಕಾರಿಗಳಿಗೆ ಪತ್ರಗಳನ್ನು ಅಥವಾ ಕಡತಗಳನ್ನು ಕಳಿಸುವ ಅಗತ್ಯವಿಲ್ಲ. ಮುಗಿದು ಹೋದ ದಾಖಲೆಗಳನ್ನು ಸಹ ಸುಲಭವಾಗಿ ಇ-ಆಫೀಸ್ ಮೂಲಕ ಪಡೆಯಬಹುದು’ ಎಂದು ಹೇಳಿದರು.</p>.<p>ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ದೇವು ಪಾಟೀಲ, ಸಿದ್ಧಪ್ಪ ಹಡಪದ, ಡಿ.ಎಫ್.ಮಡ್ಲಿ, ಕೆಂಜೋಡಿ ಗಲಭಿ, ಪಿ.ಜಿ.ತಂಗಚ್ಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ:</strong> ಸಾರ್ವಜನಿಕ ಅರ್ಜಿಗಳಿಗೆ ಬೇಗನೆ ಸ್ಪಂದಿಸಲು ಹಾಗೂ ತ್ವರಿತ ಕೆಲಸಗಳಿಗೆ ಇ-ಆಫೀಸ್ ನೆರವಾಗಲಿದ್ದು, ಸಿಬ್ಬಂದಿ ಕಾರ್ಯಕ್ಷಮತೆಯನ್ನು ಅಳೆಯಲೂ ಇದು ಸಹಾಯಕವಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಇ-ಆಫೀಸ್ ಉದ್ಘಾಟಿಸಿ ಮಾತನಾಡಿದರು.</p>.<p>ತಹಶೀಲ್ದಾರ್ ಶಂಕರ ಗೌಡಿ ಮಾತನಾಡಿ, ಸಾರ್ವಜನಿಕರು ಹಾಗೂ ವಿವಿಧ ಕಚೇರಿಗಳಿಂದ ಬರುವ ಅರ್ಜಿ, ಪತ್ರಗಳನ್ನು ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ(ಟಪಾಲು ವಿಭಾಗ) ಇ- ಆಫೀಸ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ಕಳಿಸಲಾಗುತ್ತದೆ. ನಂತರ ಇ-ಆಫೀಸ್ ಮೂಲಕವೇ ಶಿರಸ್ತೇದಾರ್ ಹಾಗೂ ತಹಶೀಲ್ದಾರ್ಗೆ ಬರುತ್ತದೆ. ಅನುಮೋದನೆ ಆದ ನಂತರ ಕಡತವು ಇ-ಆಫೀಸ್ ಮೂಲಕವೇ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಕಚೇರಿಗೆ ಹೋಗುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ಅನುಮೋದನೆಯಾದ ಪತ್ರ ಅಥವಾ ಆದೇಶವನ್ನು ಮುದ್ರಿಸಿ ಕಳಿಸಲಾಗುವುದು’ ಎಂದರು.</p>.<p>‘ಇದರಿಂದ ಸಮಯದ ಉಳಿತಾಯದೊಂದಿಗೆ ಕಾಗದ ರಹಿತ ಹಾಗೂ ಭೌತಿಕ ಕಡತಗಳ ಉಪಯೋಗ ಕಡಿಮೆಯಾಗುತ್ತದೆ. ಅರ್ಜಿಯ ಇ-ಸಂಖ್ಯೆಯ ಮೂಲಕವೇ ಸಂಬಂಧಿಸಿದ ಫೈಲ್ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೇಲಧಿಕಾರಿಗಳಿಗೆ ಪತ್ರಗಳನ್ನು ಅಥವಾ ಕಡತಗಳನ್ನು ಕಳಿಸುವ ಅಗತ್ಯವಿಲ್ಲ. ಮುಗಿದು ಹೋದ ದಾಖಲೆಗಳನ್ನು ಸಹ ಸುಲಭವಾಗಿ ಇ-ಆಫೀಸ್ ಮೂಲಕ ಪಡೆಯಬಹುದು’ ಎಂದು ಹೇಳಿದರು.</p>.<p>ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ದೇವು ಪಾಟೀಲ, ಸಿದ್ಧಪ್ಪ ಹಡಪದ, ಡಿ.ಎಫ್.ಮಡ್ಲಿ, ಕೆಂಜೋಡಿ ಗಲಭಿ, ಪಿ.ಜಿ.ತಂಗಚ್ಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>