<p><strong>ಕಾರವಾರ</strong>: ಇಲ್ಲಿನ ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ‘ಕಾಮಧೇನು’ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಲಕ್ಷಾಂತರ ಮೌಲ್ಯದ ಮೀನು ಮೂರು ದಿನಗಳಿಂದ ಉಳಿದುಕೊಂಡಿದೆ. ಸ್ಥಳೀಯ ಕೆಲ ಮುಖಂಡರ ಬೆದರಿಕೆಯಿಂದಾಗಿ ಮೀನು ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ ಎಂದು ದೋಣಿಯ ಮಾಲೀಕ ವಿಕ್ರಮ್ ತಾಂಡೇಲ್ ಆರೋಪಿಸಿದ್ದಾರೆ.</p>.<p>‘ಮೀನುಗಾರಿಕೆ ಮುಗಿಸಿ ಬಂದರಿಗೆ ಜ.9ರ ಬೆಳಿಗ್ಗೆಯೇ ದೋಣಿ ಬಂದು ನಿಂತಿದೆ. ಸುಮಾರು ₹2.5 ಲಕ್ಷಕ್ಕೂ ಹೆಚ್ಚು ಮೊತ್ತದ ಮೀನು ದೋಣಿಯಲ್ಲಿದೆ. ಅವಗಳನ್ನು ಖರೀದಿಸಲು ಈವರೆಗೆ ವ್ಯಾಪಾರಿಗಳು ಬಂದಿಲ್ಲ. ಇದಕ್ಕೆ ಪರ್ಸಿನ್ ಬೋಟ್ ಯೂನಿಯನ್ನ ಒತ್ತಡ ಕಾರಣ’ ಎಂದು ವಿಕ್ರಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಿದ್ದಾರೆ.</p>.<p>‘ಯೂನಿಯನ್ ವತಿಯಿಂದ ಬಹಿಷ್ಕರಿಸಲಾಗಿದ್ದ ದೋಣಿಯ ಮಾಲೀಕರಿಗೆ ಬೆಂಬಲಿಸಿದ ಬಳಿಕ ನಮ್ಮ ದೋಣಿಯಿಂದ ಮೀನು ಖರೀದಿಸದಂತೆ ವ್ಯಾಪಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಹಲವು ವರ್ಷಗಳಿಂದ ಮೀನುಗಾರಿಕೆ ವೃತ್ತಿ ನಡೆಸುತ್ತಿರುವ ನಮಗೆ ಆರ್ಥಿಕ ನಷ್ಟದ ಜತೆಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ’ ಎಂದು ದೂರಿದ್ದಾರೆ.</p>.<p>‘ಕಾಮಧೇನು ದೋಣಿಯಿಂದ ಬೆಳಕಿನ ಮೀನುಗಾರಿಕೆ ನಡೆಸುತ್ತಿರುವ ಆರೋಪಗಳಿವೆ. ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಯೂನಿಯನ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಪರ್ಸಿನ್ ಬೋಟ್ ಯೂನಿಯನ್ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.</p>.<p>‘ಮೀನುಗಾರರಿಗೆ ಸೌಲಭ್ಯ ಒದಗಿಸುವುದಷ್ಟೆ ನಮ್ಮ ಜವಾಬ್ದಾರಿ. ಮೀನು ವ್ಯಾಪಾರದ ವಿಷಯದಲ್ಲಿ ಇಲಾಖೆ ಮಧ್ಯಪ್ರವೇಶಿಸುವುದಿಲ್ಲ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೆಟ್ಟಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಇಲ್ಲಿನ ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ‘ಕಾಮಧೇನು’ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಲಕ್ಷಾಂತರ ಮೌಲ್ಯದ ಮೀನು ಮೂರು ದಿನಗಳಿಂದ ಉಳಿದುಕೊಂಡಿದೆ. ಸ್ಥಳೀಯ ಕೆಲ ಮುಖಂಡರ ಬೆದರಿಕೆಯಿಂದಾಗಿ ಮೀನು ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ ಎಂದು ದೋಣಿಯ ಮಾಲೀಕ ವಿಕ್ರಮ್ ತಾಂಡೇಲ್ ಆರೋಪಿಸಿದ್ದಾರೆ.</p>.<p>‘ಮೀನುಗಾರಿಕೆ ಮುಗಿಸಿ ಬಂದರಿಗೆ ಜ.9ರ ಬೆಳಿಗ್ಗೆಯೇ ದೋಣಿ ಬಂದು ನಿಂತಿದೆ. ಸುಮಾರು ₹2.5 ಲಕ್ಷಕ್ಕೂ ಹೆಚ್ಚು ಮೊತ್ತದ ಮೀನು ದೋಣಿಯಲ್ಲಿದೆ. ಅವಗಳನ್ನು ಖರೀದಿಸಲು ಈವರೆಗೆ ವ್ಯಾಪಾರಿಗಳು ಬಂದಿಲ್ಲ. ಇದಕ್ಕೆ ಪರ್ಸಿನ್ ಬೋಟ್ ಯೂನಿಯನ್ನ ಒತ್ತಡ ಕಾರಣ’ ಎಂದು ವಿಕ್ರಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಿದ್ದಾರೆ.</p>.<p>‘ಯೂನಿಯನ್ ವತಿಯಿಂದ ಬಹಿಷ್ಕರಿಸಲಾಗಿದ್ದ ದೋಣಿಯ ಮಾಲೀಕರಿಗೆ ಬೆಂಬಲಿಸಿದ ಬಳಿಕ ನಮ್ಮ ದೋಣಿಯಿಂದ ಮೀನು ಖರೀದಿಸದಂತೆ ವ್ಯಾಪಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಹಲವು ವರ್ಷಗಳಿಂದ ಮೀನುಗಾರಿಕೆ ವೃತ್ತಿ ನಡೆಸುತ್ತಿರುವ ನಮಗೆ ಆರ್ಥಿಕ ನಷ್ಟದ ಜತೆಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ’ ಎಂದು ದೂರಿದ್ದಾರೆ.</p>.<p>‘ಕಾಮಧೇನು ದೋಣಿಯಿಂದ ಬೆಳಕಿನ ಮೀನುಗಾರಿಕೆ ನಡೆಸುತ್ತಿರುವ ಆರೋಪಗಳಿವೆ. ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಯೂನಿಯನ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಪರ್ಸಿನ್ ಬೋಟ್ ಯೂನಿಯನ್ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.</p>.<p>‘ಮೀನುಗಾರರಿಗೆ ಸೌಲಭ್ಯ ಒದಗಿಸುವುದಷ್ಟೆ ನಮ್ಮ ಜವಾಬ್ದಾರಿ. ಮೀನು ವ್ಯಾಪಾರದ ವಿಷಯದಲ್ಲಿ ಇಲಾಖೆ ಮಧ್ಯಪ್ರವೇಶಿಸುವುದಿಲ್ಲ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೆಟ್ಟಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>