‘ಮೂರ್ನಾಲ್ಕು ವರ್ಷಗಳಲ್ಲಿ ಉತ್ತರ ಕನ್ನಡದ ಕರಾವಳಿಗೆ ಏಳೆಂಟು ಚಂಡಮಾರುತಗಳು ಅಪ್ಪಳಿಸಿವೆ. ಈ ವರ್ಷ ಮೀನುಗಾರಿಕೆ ಒಳ್ಳೆಯ ರೀತಿಯಲ್ಲಿ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಆಕಸ್ಮಿಕ ಮಳೆ, ಗಾಳಿ ಹಾಗೂ ಚಂಡಮಾರುತದಿಂದ ತಿಂಗಳುಗಟ್ಟಲೆ ಕೈಕಟ್ಟಿ ಕೂರುವಂಥ ಸ್ಥಿತಿಯಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಜಿಲ್ಲೆಯ ಹಲವು ಬಂದರುಗಳಲ್ಲಿ ದೋಣಿಗಳಿಗೆ ಹಾನಿಯಾಗಿದೆ’ ಎಂದರು.