<p><strong>ಕಾರವಾರ:</strong> ತಾಲ್ಲೂಕಿನ ನಗೆ ಗ್ರಾಮದ ಉದ್ಭವಲಿಂಗ ದೇವರ ಜಾತ್ರೆಯ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಹಗರಣ ರೂಪಕ ಪ್ರದರ್ಶನ ಗಮನಸೆಳೆಯಿತು.</p>.<p>ಗ್ರಾಮದಲ್ಲಿರುವ ಹಾಲಕ್ಕಿ ಒಕ್ಕಲಿಗ ಸಮುದಾಯದ ಜನರು ಜಾತ್ರೆಯ ವೇಳೆ ಪ್ರದರ್ಶಿಸುವ ಹಗರಣ ಆಕರ್ಷಕ ಪ್ರತಿಕೃತಿಗಳನ್ನು ಒಳಗೊಂಡಿರುವ ಕಾರಣ, ಹಗರಣ ಕಳ್ತುಂಬಿಕೊಳ್ಳಲು ನೂರಾರು ಜನರು ಪಾಲ್ಗೊಂಡಿದ್ದರು. ದೂರದ ಊರುಗಳಿಂದಲೂ ಜನರು ಗ್ರಾಮಕ್ಕೆ ಭೇಟಿ ನೀಡಿದ್ದರು.</p>.<p>ಗ್ರಾಮಸ್ಥರೇ ಶ್ರಮದಿಂದ ಸಿದ್ಧಪಡಿಸಿದ ಕಲಾಕೃತಿಗಳನ್ನು ಉದ್ಭವಲಿಂಗ ಗುಡಿಯ ಸಮೀಪದ ಬಯಲಿನಲ್ಲಿ ಮೆರವಣಿಗೆ ನಡೆಸಿ ಪ್ರದರ್ಶಿಸಲಾಯಿತು. ಪ್ರಸಕ್ತ ಸನ್ನಿವೇಶಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಲು ಹಗರಣ ವೇದಿಕೆ ಆಗುತ್ತಿದ್ದು, ವಿವಿಧ ಬಗೆಯ ವೇಷಧರಿಸಿದ್ದವರು ಕಲಾಕೃತಿಗಳ ಮೆರವಣಿಗೆಯೊಟ್ಟಿಗೆ ಹೆಜ್ಜೆ ಹಾಕುತ್ತ ಜನರನ್ನು ರಂಜಿಸುವುದು ವಿಶೇಷ ಎನಿಸಿತು.</p>.<p>ದೈತ್ಯಾಕಾರದ ಪ್ರಾಣಿಗಳು, ಕಾಡು ಮನುಷ್ಯರ ಪ್ರತಿಕೃತಿಗಳು, ಸೇರಿದಂತೆ ಹಲವು ಬಗೆಯ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಕಲಾಕೃತಿಗಳನ್ನು ಸಿದ್ಧಪಡಿಸಲು ತಗಲುವ ಸಾವಿರಾರು ರೂಪಾಯಿ ವೆಚ್ಚವನ್ನು ಗ್ರಾಮಸ್ಥರೇ ಭರಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತಾಲ್ಲೂಕಿನ ನಗೆ ಗ್ರಾಮದ ಉದ್ಭವಲಿಂಗ ದೇವರ ಜಾತ್ರೆಯ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಹಗರಣ ರೂಪಕ ಪ್ರದರ್ಶನ ಗಮನಸೆಳೆಯಿತು.</p>.<p>ಗ್ರಾಮದಲ್ಲಿರುವ ಹಾಲಕ್ಕಿ ಒಕ್ಕಲಿಗ ಸಮುದಾಯದ ಜನರು ಜಾತ್ರೆಯ ವೇಳೆ ಪ್ರದರ್ಶಿಸುವ ಹಗರಣ ಆಕರ್ಷಕ ಪ್ರತಿಕೃತಿಗಳನ್ನು ಒಳಗೊಂಡಿರುವ ಕಾರಣ, ಹಗರಣ ಕಳ್ತುಂಬಿಕೊಳ್ಳಲು ನೂರಾರು ಜನರು ಪಾಲ್ಗೊಂಡಿದ್ದರು. ದೂರದ ಊರುಗಳಿಂದಲೂ ಜನರು ಗ್ರಾಮಕ್ಕೆ ಭೇಟಿ ನೀಡಿದ್ದರು.</p>.<p>ಗ್ರಾಮಸ್ಥರೇ ಶ್ರಮದಿಂದ ಸಿದ್ಧಪಡಿಸಿದ ಕಲಾಕೃತಿಗಳನ್ನು ಉದ್ಭವಲಿಂಗ ಗುಡಿಯ ಸಮೀಪದ ಬಯಲಿನಲ್ಲಿ ಮೆರವಣಿಗೆ ನಡೆಸಿ ಪ್ರದರ್ಶಿಸಲಾಯಿತು. ಪ್ರಸಕ್ತ ಸನ್ನಿವೇಶಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಲು ಹಗರಣ ವೇದಿಕೆ ಆಗುತ್ತಿದ್ದು, ವಿವಿಧ ಬಗೆಯ ವೇಷಧರಿಸಿದ್ದವರು ಕಲಾಕೃತಿಗಳ ಮೆರವಣಿಗೆಯೊಟ್ಟಿಗೆ ಹೆಜ್ಜೆ ಹಾಕುತ್ತ ಜನರನ್ನು ರಂಜಿಸುವುದು ವಿಶೇಷ ಎನಿಸಿತು.</p>.<p>ದೈತ್ಯಾಕಾರದ ಪ್ರಾಣಿಗಳು, ಕಾಡು ಮನುಷ್ಯರ ಪ್ರತಿಕೃತಿಗಳು, ಸೇರಿದಂತೆ ಹಲವು ಬಗೆಯ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಕಲಾಕೃತಿಗಳನ್ನು ಸಿದ್ಧಪಡಿಸಲು ತಗಲುವ ಸಾವಿರಾರು ರೂಪಾಯಿ ವೆಚ್ಚವನ್ನು ಗ್ರಾಮಸ್ಥರೇ ಭರಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>