ಘಟನೆಯ ವಿವರ:ಕೃಷ್ಣಮೂರ್ತಿ ಜೋಶಿ ಅವರ ಗದ್ದೆಯ ತುದಿಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ವಿದ್ಯುತ್ ತಂತಿ ಹಾಕಲಾಗಿತ್ತು. ವಿದ್ಯುತ್ ಪ್ರವಹಿಸುತ್ತಿದ್ದ ಬೇಲಿ ತಗುಲಿ ಕಾಡೆಮ್ಮೆಯೊಂದು ನವೆಂಬರ್ 30ರಂದು ಮೃತಪಟ್ಟಿತ್ತು. ಜೋಶಿಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ನಾಲ್ವರು ಕೆಲಸಗಾರರ ಸಹಾಯದೊಂದಿಗೆ, ಆಳದ ಗುಂಡಿ ತೆಗೆದು, ಅದಲ್ಲಿ ಸತ್ತ ಕಾಡೆಮ್ಮೆಯನ್ನು ಹುಗಿದಿದ್ದರು. ಘಟನೆಯ ಜಾಡು ಹಿಡಿದ ಡಿಎಫ್ಓ ಎಸ್.ಜಿ.ಹೆಗಡೆ, ಎಸಿಎಫ್ ಅಜಯ್ ಅವರು ವಲಯ ಅರಣ್ಯಾಧಿಕಾರಿ ಪವಿತ್ರಾ, ಎಂ.ಎಚ್.ನಾಯ್ಕ ಮೂಲಕ ತನಿಖೆಗೆ ಇಳಿದು ಅಂತಿಮವಾಗಿ ಪ್ರಕರಣ ಬೇಧಿಸಿದ್ದಾರೆ.