<p><strong>ಗೋಕರ್ಣ:</strong> ಮಾಘ ಮಾಸದ ಅಮವಾಸ್ಯೆಯ ದಿನವಾದ ಗುರುವಾರ ಗೋಕರ್ಣದಲ್ಲಿ ಸಾವಿರಾರು ಭಕ್ತರು ಸಮುದ್ರ ತೀರದಲ್ಲಿ ತರ್ಪಣ, ದಾನ ಧರ್ಮ, ಪಡಿ ಸಮರ್ಪಿಸಿ ಕೃತಾರ್ಥರಾದರು.</p>.<p>ಕೆಲವರು ಸಮುದ್ರದಲ್ಲಿ ಸ್ನಾನ ಮಾಡಿ ದಡದಲ್ಲಿಕುಳಿತ ಭಿಕ್ಷುಕರಿಗೆ ಅಕ್ಕಿ, ಹಣ ದಾನ ಮಾಡಿದರು. ಇನ್ನು ಕೆಲವರು ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಮುಡಿ ಸಮರ್ಪಿಸಿ ಪಡಿ ನೀಡಿ ಧನ್ಯರಾದರು. ಈ ಪದ್ಧತಿ ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದು, ಸುತ್ತಮುತ್ತಲಿನ ಹಳ್ಳಿಯ ಜನ ತಪ್ಪದೇ ಪಡಿ ಹಾಕುವ ಈ ಪದ್ಧತಿ ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.</p>.<p>ಗೋಕರ್ಣ ಪವಿತ್ರ ಕ್ಷೇತ್ರವಾದ್ದರಿಂದ ತಮ್ಮ ಪಿತೃಗಳ ಸಂತೃಪ್ತಿಗೋಸ್ಕರ ಸಮುದ್ರದಲ್ಲಿ ಸ್ನಾನ ಮಾಡಿ ತೆಂಗಿನಕಾಯಿ, ಅಕ್ಕಿ, ಹಣ ದಾನ ಮಾಡುವ ಪದ್ಧತಿ ಮೊದಲಿನಿಂದಲೂ ರೂಢಿಯಿಂದ ಬೆಳೆದು ಬಂದಿದೆ.</p>.<p><strong>ತಿಲ ತರ್ಪಣ:-</strong> ತಮ್ಮ ಮೂರು ತಲೆಮಾರಿನ ಪಿತೃಗಳಿಗೆ ಹಾಗೂ ಬಂಧುಗಳಿಗೆ ಸಮುದ್ರ ದಂಡೆಯಲ್ಲಿ ತಿಲ ತರ್ಪಣ ನೀಡುವುದು ನಡೆದು ಬಂದ ಪದ್ಧತಿ. ಅದೇ ರೀತಿ ಈ ವರ್ಷವೂ ಸುತ್ತಮುತ್ತಲಿನ ಹಳ್ಳಿಯ ಜನರು ಪುರೋಹಿತರ ಸಹಾಯದೊಂದಿಗೆ ತಮ್ಮ ಪೂರ್ವಜರಿಗೆ ತರ್ಪಣ, ಪಿಂಡಪ್ರಧಾನ ಮಾಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾದರು.</p>.<p>ಶುಕ್ರವಾರ ಬ್ರಹ್ಮರಥೋತ್ಸವ ನಡೆಯಲಿದೆ. ರಥ ಕಟ್ಟುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ:</strong> ಮಾಘ ಮಾಸದ ಅಮವಾಸ್ಯೆಯ ದಿನವಾದ ಗುರುವಾರ ಗೋಕರ್ಣದಲ್ಲಿ ಸಾವಿರಾರು ಭಕ್ತರು ಸಮುದ್ರ ತೀರದಲ್ಲಿ ತರ್ಪಣ, ದಾನ ಧರ್ಮ, ಪಡಿ ಸಮರ್ಪಿಸಿ ಕೃತಾರ್ಥರಾದರು.</p>.<p>ಕೆಲವರು ಸಮುದ್ರದಲ್ಲಿ ಸ್ನಾನ ಮಾಡಿ ದಡದಲ್ಲಿಕುಳಿತ ಭಿಕ್ಷುಕರಿಗೆ ಅಕ್ಕಿ, ಹಣ ದಾನ ಮಾಡಿದರು. ಇನ್ನು ಕೆಲವರು ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಮುಡಿ ಸಮರ್ಪಿಸಿ ಪಡಿ ನೀಡಿ ಧನ್ಯರಾದರು. ಈ ಪದ್ಧತಿ ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದು, ಸುತ್ತಮುತ್ತಲಿನ ಹಳ್ಳಿಯ ಜನ ತಪ್ಪದೇ ಪಡಿ ಹಾಕುವ ಈ ಪದ್ಧತಿ ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.</p>.<p>ಗೋಕರ್ಣ ಪವಿತ್ರ ಕ್ಷೇತ್ರವಾದ್ದರಿಂದ ತಮ್ಮ ಪಿತೃಗಳ ಸಂತೃಪ್ತಿಗೋಸ್ಕರ ಸಮುದ್ರದಲ್ಲಿ ಸ್ನಾನ ಮಾಡಿ ತೆಂಗಿನಕಾಯಿ, ಅಕ್ಕಿ, ಹಣ ದಾನ ಮಾಡುವ ಪದ್ಧತಿ ಮೊದಲಿನಿಂದಲೂ ರೂಢಿಯಿಂದ ಬೆಳೆದು ಬಂದಿದೆ.</p>.<p><strong>ತಿಲ ತರ್ಪಣ:-</strong> ತಮ್ಮ ಮೂರು ತಲೆಮಾರಿನ ಪಿತೃಗಳಿಗೆ ಹಾಗೂ ಬಂಧುಗಳಿಗೆ ಸಮುದ್ರ ದಂಡೆಯಲ್ಲಿ ತಿಲ ತರ್ಪಣ ನೀಡುವುದು ನಡೆದು ಬಂದ ಪದ್ಧತಿ. ಅದೇ ರೀತಿ ಈ ವರ್ಷವೂ ಸುತ್ತಮುತ್ತಲಿನ ಹಳ್ಳಿಯ ಜನರು ಪುರೋಹಿತರ ಸಹಾಯದೊಂದಿಗೆ ತಮ್ಮ ಪೂರ್ವಜರಿಗೆ ತರ್ಪಣ, ಪಿಂಡಪ್ರಧಾನ ಮಾಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾದರು.</p>.<p>ಶುಕ್ರವಾರ ಬ್ರಹ್ಮರಥೋತ್ಸವ ನಡೆಯಲಿದೆ. ರಥ ಕಟ್ಟುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>