ಒಂದು ಗಂಟೆ ಕಾಲ ಭಕ್ತರಿಗೆ ಆತ್ಮಲಿಂಗದ ದರ್ಶನಕ್ಕೆ ಅವಕಾಶ ನಿಲ್ಲಿಸಲಾಗಿತ್ತು. ಸಮುದ್ರದಲ್ಲೂ ಭರತವಿದ್ದು, ಸಂಗಮದ ನಾಲೆಯಿಂದ ಬಂದ ಮಳೆಯ ನೀರು ಸಮುದ್ರಕ್ಕೆ ಸೇರದಿರುವುದೇ ಇದಕ್ಕೆ ಕಾರಣವಾಗಿತ್ತು. ಆ ನೀರು ಗರ್ಭಗುಡಿಯಿಂದ ತೀರ್ಥ ಹೊರಹೋಗುವ ಸೋಮಸೂತ್ರದಿಂದ ಒಳನುಗ್ಗಿ ಗರ್ಭಗುಡಿ ಜಲಾವೃತವಾಗಿತ್ತು. ನೀರೆಲ್ಲಾ ಹೊರಹಾಕಿದ ಮೇಲೆ ಮಧ್ಯಾಹ್ನ 3 ಗಂಟೆಯ ನಂತರ ಮಹಾಪೂಜೆ ನೆರವೇರಿಸಲಾಯಿತು.