<p><strong>ಭಟ್ಕಳ</strong>: ತಾಲ್ಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀದೇವಿ ಹೋಟೆಲ್ ಎದುರಿಗಿನ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು ತೆಂಗಿನಗುಂಡಿಯ ನಿವಾಸಿ ಸೀತಾರಾಮ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ತಾಲ್ಲೂಕಿನ ಹಾಡುವಳ್ಳಿಯ ಹಸ್ರವಳ್ಳಿಯಲ್ಲಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಹಸ್ರವಳ್ಳಿ ನಿವಾಸಿ ಶಂಕರ ನಾರಾಯಣ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಜೂಜಾಟ; ದಾಳಿ:</strong> ತಾಲ್ಲೂಕಿನ ಕುಂಟವಾಣಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು 8 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ಭಟ್ಕಳ ನಿವಾಸಿಗಳಾದ ವಿನಾಯಕ ದೇಶಭಂಡಾರಿ, ರವಿ ಭಂಡಾರಿ, ರವಿ ಗೊಂಡ, ವಾಸುದೇವ ಗೊಂಡ, ಮಹೇಶ ಭಂಡಾರಿ, ಸಂತೋಷ ಗೊಂಡ, ಮಹೇಶ ಭಂಡಾರಿ, ಮಂಜುನಾಥ ಗೊಂಡ ಆರೋಪಿಗಳು.</p>.<p>ಆರೋಪಿಗಳಿಂದ ಆಟಕ್ಕೆ ಬಳಸಿದ ₹4.5 ಲಕ್ಷ ನಗದು ಹಾಗೂ ಮೋಟರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಮಟ್ಕಾ ದಾಳಿ</strong>: ಮುರುಡೇಶ್ವರದ ತೆರ್ನಮಕ್ಕಿಯ ಹೆರಾಡಿ ಕ್ರಾಸ್ ಬಳಿ ಶುಕ್ರವಾರ ಮಟ್ಕಾ ಆಡಿಸುತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು, ಮುರಡೇಶ್ವರ ನಿವಾಸಿ ಶ್ರೀಧರ ಜಟ್ಟಾ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ</strong>: ತಾಲ್ಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀದೇವಿ ಹೋಟೆಲ್ ಎದುರಿಗಿನ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು ತೆಂಗಿನಗುಂಡಿಯ ನಿವಾಸಿ ಸೀತಾರಾಮ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ತಾಲ್ಲೂಕಿನ ಹಾಡುವಳ್ಳಿಯ ಹಸ್ರವಳ್ಳಿಯಲ್ಲಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಹಸ್ರವಳ್ಳಿ ನಿವಾಸಿ ಶಂಕರ ನಾರಾಯಣ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಜೂಜಾಟ; ದಾಳಿ:</strong> ತಾಲ್ಲೂಕಿನ ಕುಂಟವಾಣಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು 8 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ಭಟ್ಕಳ ನಿವಾಸಿಗಳಾದ ವಿನಾಯಕ ದೇಶಭಂಡಾರಿ, ರವಿ ಭಂಡಾರಿ, ರವಿ ಗೊಂಡ, ವಾಸುದೇವ ಗೊಂಡ, ಮಹೇಶ ಭಂಡಾರಿ, ಸಂತೋಷ ಗೊಂಡ, ಮಹೇಶ ಭಂಡಾರಿ, ಮಂಜುನಾಥ ಗೊಂಡ ಆರೋಪಿಗಳು.</p>.<p>ಆರೋಪಿಗಳಿಂದ ಆಟಕ್ಕೆ ಬಳಸಿದ ₹4.5 ಲಕ್ಷ ನಗದು ಹಾಗೂ ಮೋಟರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಮಟ್ಕಾ ದಾಳಿ</strong>: ಮುರುಡೇಶ್ವರದ ತೆರ್ನಮಕ್ಕಿಯ ಹೆರಾಡಿ ಕ್ರಾಸ್ ಬಳಿ ಶುಕ್ರವಾರ ಮಟ್ಕಾ ಆಡಿಸುತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು, ಮುರಡೇಶ್ವರ ನಿವಾಸಿ ಶ್ರೀಧರ ಜಟ್ಟಾ ನಾಯ್ಕ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>