ಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದ ಅವರು, ಪಟ್ಟಣದ ಹೈಡಕಿಯಲ್ಲಿ ವಾಸವಿದ್ದರು. ಅವರು ರಾಜ್ಯಮಟ್ಟದ ಅನೇಕ ಆಟಗಳಲ್ಲಿ ತಂಡಕ್ಕೆ ವಿಜಯ ತಂದುಕೊಟ್ಟಿದ್ದರು. 2009 ಹಾಗೂ 2015ರಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಅವರ ಕ್ರೀಡಾಸಾಧನೆಗೆ ತಾಲ್ಲೂಕು ಗಣರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದ್ದವು.