‘ಕದಂಬೋತ್ಸವದ ವೈಚಾರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ದಿನ ನಡೆಯುತ್ತವೆಯಾದರೂ, ಅದಕ್ಕೆ ಪೂರ್ವಭಾವಿಯಾಗಿ ಗುಡ್ನಾಪುರದಲ್ಲಿ ಜ್ಯೋತಿ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಕದಂಬ ಕಪ್ ಕಬಡ್ಡಿ, ಸ್ಲೋ ಮೊಪೆಡ್, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಗಳು ಪೂರ್ಣಗೊಂಡಿವೆ. ಸಾರ್ವಜನಿಕರು ಅತೀ ಉತ್ಸಾಹದಿಂದ ಇವುಗಳಲ್ಲಿ ಭಾಗವಹಿಸಿದರು’ ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.