ಹೊನ್ನಾವರ: ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಗೌಡ ಮನವಿ ಮಾತನಾಡಿ, ಕನ್ನಡದ ಪರವಾಗಿ ಧನಿಯೆತ್ತಿದ ಹಲವು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರು ದಿನನಿತ್ಯ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಕನ್ನಡದಲ್ಲಿ ನಾಮಫಲಕ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕನ್ನಡ ಭಾಷೆಯ ಬಗೆಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯಕ, ಸಚಿನ್ ನಾಯ್ಕ, ಸಂದೇಶ ಮೇಸ್ತ, ಎಸ್.ಡಿ.ಹೆಗಡೆ, ತುಕಾರಾಮ ನಾಯ್ಕ, ಅಣ್ಣಪ್ಪ ನಾಯಕ, ಅಣ್ಣಪ್ಪ ಗೌಡ,ರಾಜೇಶ ನಾಯ್ಕ, ಶ್ರೀಕಾಂತ ಪಟಗಾರ, ಶಂಕರ ಗೌಡ ಗುಣವಂತೆ, ಪ್ರವೀಣ ನಾಯ್ಕ, ಗಣೇಶ ಗೌಡ, ಜ್ಯೋತಿ ಮಡಿವಾಳ, ಚಂದ್ರಕಲಾ ಪಟಗಾರ, ನಾಗವೇಣಿ ನಾಯ್ಕ ಇದ್ದರು.