‘ಸಭೆಯ ಹೆಸರಿನಲ್ಲಿ ಕಾರ್ಯಕರ್ತೆಯರನ್ನು ಕರೆಯಲಾಗಿತ್ತು. ಈ ವೇಳೆ ಸೀರೆ ಅಥವಾ ಇತರ ಉಡುಗೋರೆ ನೀಡಿರಬಹುದು. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ವೇಳೆ ಬೂತ್ ಲೆವಲ್ ಅಧಿಕಾರಿಗಳಾಗಿ (ಬಿ.ಎಲ್.ಒ.) ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತಯರಿಗೆ ಚುನಾವಣೆ ಸಮೀಪಿಸಿದ ವೇಳೆ ಸೀರೆ ಹಂಚಿಕೆ ಮಾಡಿರುವುದು ತಪ್ಪು’ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಹೇಳಿದ್ದಾರೆ.