ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಅವರ ವಿರುದ್ಧ ಅಸಮಾಧಾನ ತೋಡಿಕೊಂಡು ಹೇಳಿಕೆ ನೀಡಿದ ಕುರಿತಂತೆ ಕೇಳಲಾದ ಪ್ರಶ್ನೆಗೆಪ್ರತಿಕ್ರಿಯಿಸಿ ‘ಪಕ್ಷದೊಳಗೆ ಚರ್ಚಿಸಲು ಅವಕಾಶ ಇದೆ. ಮನಸ್ಸಿಗೆ ಬೇಸರವಾಗಿದ್ದರೆ ರಾಜ್ಯಾಧ್ಯಕ್ಷರ ಬಳಿ ಮಾತನಾಡಬಹುದಿತ್ತು’ ಎಂದರು. ವಿಶ್ವನಾಥ್ ಅವರ ಹೇಳಿಕೆಗೆ ಇದಕ್ಕಿಂತ ಹೆಚ್ಚು ಮಾತನಾಡಲಾರೆ ಎಂದರು.