<p><strong>ಕಾರವಾರ:</strong> ಜಿಲ್ಲೆಯ ಅದ್ದೂರಿ ದ್ವೀಪ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಕೂರ್ಮಗಡ ಜಾತ್ರೆಯು ಶನಿವಾರ ಸಂಭ್ರಮದಿಂದ ನಡೆಯಿತು. ನೂರಾರು ಭಕ್ತರು ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ಸಾಗಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು.</p>.<p>ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿನಿಂದ 25 ದೋಣಿಗಳು 6 ಕಿ.ಮೀ ದೂರದಲ್ಲಿರುವ ನಡುಗಡ್ಡೆಗೆ ಭಕ್ತರನ್ನು ಕರೆದೊಯ್ದವು. ಸುರಕ್ಷತೆ ದೃಷ್ಟಿಯಿಂದ ದೋಣಿಯಲ್ಲಿ ಸಾಗುವವರು ಕಡ್ಡಾಯವಾಗಿ ಜೀವರಕ್ಷಕ ಜಾಕೆಟ್ ಧರಿಸುವಂತೆ ಎಚ್ಚರಿಕೆ ವಹಿಸಲಾಗಿತ್ತು. ನಿಗದಿಗಿಂತ ಹೆಚ್ಚು ಜನರು ಏಕಕಾಲಕ್ಕೆ ದೋಣಿಯಲ್ಲಿ ಸಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಆದರೂ, ಕೆಲ ದೋಣಿಗಳಲ್ಲಿ ಜನಜಂಗುಳಿ ಉಂಟಾಗಿದ್ದು ಕಂಡುಬಂತು.</p>.<p>ಕಡವಾಡ ಗ್ರಾಮದಿಂದ ನರಸಿಂಹ ದೇವರ ಮೂರ್ತಿಯನ್ನು ನಸುಕಿನ ಜಾವ ಸಾಂಪ್ರದಾಯಿಕ ದೋಣಿಯಲ್ಲಿ ಕೂರ್ಮಗಡ ದ್ವೀಪಕ್ಕೆ ಸಾಂಪ್ರದಾಯಿಕ ಆಚರಣೆ ಮೂಲಕ ಕರೆದೊಯ್ಯಲಾಯಿತು. ದ್ವೀಪದಲ್ಲಿರುವ ಜಾತ್ರೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಪ್ರಕ್ರಿಯೆ ನೆರವೇರಿದ ಬಳಿಕ ಕಡವಾಡದ ಸಪ್ರೆ ಕುಟುಂಬದವರು ಪೂಜೆ ಸಲ್ಲಿಸಿದರು. ಆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<p>ಜಾತ್ರೆ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಜನರು ಬಂದಿದ್ದರು. ಬಾಳೆಗೊನೆ, ಹಣ್ಣುಕಾಯಿ ಸೇರಿದಂತೆ ಹರಕೆಗಳನ್ನು ಅರ್ಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<p>ದ್ವೀಪದ ಜಾತ್ರಾ ಗದ್ದುಗೆಯಿಂದ ಭಾನುವಾರ ಬೆಳಿಗ್ಗೆ ದೇವರ ಮೂರ್ತಿಯನ್ನು ಕೋಡಿಬಾಗದಲ್ಲಿರುವ ಮಂಟಪಕ್ಕೆ ತರಲಾಗುತ್ತದೆ. ಅಲ್ಲಿಂದ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಕಡವಾಡಕ್ಕೆ ಕರೆತರಲಾಗುತ್ತದೆ.</p>.<h2> ಜಟ್ಟಿ ಇಲ್ಲದೆ ತೊಂದರೆ </h2><p>‘ಕೂರ್ಮಗಡ ದ್ವೀಪದಲ್ಲಿ ದೋಣಿಗಳ ಸುರಕ್ಷಿತ ನಿಲುಗಡೆಗೆ ಶಾಶ್ವತ ಜಟ್ಟಿ ಕಲ್ಪಿಸದ ಕಾರಣದಿಂದ ಜಾತ್ರೆ ವೇಳೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಟ್ರಾಲರ್ ಪರ್ಸಿನ್ ದೋಣಿಗಳಲ್ಲಿ ಬಂದರೂ ಆ ದೋಣಿಯನ್ನು ದ್ವೀಪದಿಂದ ದೂರದಲ್ಲೇ ಇಳಿದು ಡಿಂಗಿ (ಸಣ್ಣ ದೋಣಿ) ಏರಿ ಬರಬೇಕು. ಇದರಿಂದ ಮಹಿಳೆಯರು ಅಶಕ್ತರಿಗೆ ಸಮಸ್ಯೆಯಾಗುತ್ತಿದೆ’ ಎಂದು ಭಕ್ತರು ದೂರಿದರು. ಕೂರ್ಮಗಡ ದ್ವೀಪದಲ್ಲಿ ಜಟ್ಟಿ ನಿರ್ಮಿಸಲು ಸಾಗರಮಾಲಾ ಯೋಜನೆಯಡಿ ಈ ಹಿಂದೆ ಅನುದಾನ ಮಂಜೂರಾಗಿದ್ದರೂ ಈವರೆಗೆ ಜಟ್ಟಿ ನಿರ್ಮಾಣ ಕೆಲಸ ನಡೆದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಬಂದಿದ್ದರಿಂದ ಸಮುದ್ರದ ಮಾರ್ಗದುದ್ದಕ್ಕೂ ಕರಾವಳಿ ಕಾವಲು ಪಡೆ ಕಸ್ಟಮ್ ಇಲಾಖೆಯ ದೋಣಿಗಳ ಮೂಲಕ ಗಸ್ತು ತಿರುಗುತ್ತ ಪೊಲೀಸರು ನಿಗಾ ಇಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಜಿಲ್ಲೆಯ ಅದ್ದೂರಿ ದ್ವೀಪ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಕೂರ್ಮಗಡ ಜಾತ್ರೆಯು ಶನಿವಾರ ಸಂಭ್ರಮದಿಂದ ನಡೆಯಿತು. ನೂರಾರು ಭಕ್ತರು ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ಸಾಗಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು.</p>.<p>ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿನಿಂದ 25 ದೋಣಿಗಳು 6 ಕಿ.ಮೀ ದೂರದಲ್ಲಿರುವ ನಡುಗಡ್ಡೆಗೆ ಭಕ್ತರನ್ನು ಕರೆದೊಯ್ದವು. ಸುರಕ್ಷತೆ ದೃಷ್ಟಿಯಿಂದ ದೋಣಿಯಲ್ಲಿ ಸಾಗುವವರು ಕಡ್ಡಾಯವಾಗಿ ಜೀವರಕ್ಷಕ ಜಾಕೆಟ್ ಧರಿಸುವಂತೆ ಎಚ್ಚರಿಕೆ ವಹಿಸಲಾಗಿತ್ತು. ನಿಗದಿಗಿಂತ ಹೆಚ್ಚು ಜನರು ಏಕಕಾಲಕ್ಕೆ ದೋಣಿಯಲ್ಲಿ ಸಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಆದರೂ, ಕೆಲ ದೋಣಿಗಳಲ್ಲಿ ಜನಜಂಗುಳಿ ಉಂಟಾಗಿದ್ದು ಕಂಡುಬಂತು.</p>.<p>ಕಡವಾಡ ಗ್ರಾಮದಿಂದ ನರಸಿಂಹ ದೇವರ ಮೂರ್ತಿಯನ್ನು ನಸುಕಿನ ಜಾವ ಸಾಂಪ್ರದಾಯಿಕ ದೋಣಿಯಲ್ಲಿ ಕೂರ್ಮಗಡ ದ್ವೀಪಕ್ಕೆ ಸಾಂಪ್ರದಾಯಿಕ ಆಚರಣೆ ಮೂಲಕ ಕರೆದೊಯ್ಯಲಾಯಿತು. ದ್ವೀಪದಲ್ಲಿರುವ ಜಾತ್ರೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಪ್ರಕ್ರಿಯೆ ನೆರವೇರಿದ ಬಳಿಕ ಕಡವಾಡದ ಸಪ್ರೆ ಕುಟುಂಬದವರು ಪೂಜೆ ಸಲ್ಲಿಸಿದರು. ಆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<p>ಜಾತ್ರೆ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಜನರು ಬಂದಿದ್ದರು. ಬಾಳೆಗೊನೆ, ಹಣ್ಣುಕಾಯಿ ಸೇರಿದಂತೆ ಹರಕೆಗಳನ್ನು ಅರ್ಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<p>ದ್ವೀಪದ ಜಾತ್ರಾ ಗದ್ದುಗೆಯಿಂದ ಭಾನುವಾರ ಬೆಳಿಗ್ಗೆ ದೇವರ ಮೂರ್ತಿಯನ್ನು ಕೋಡಿಬಾಗದಲ್ಲಿರುವ ಮಂಟಪಕ್ಕೆ ತರಲಾಗುತ್ತದೆ. ಅಲ್ಲಿಂದ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಕಡವಾಡಕ್ಕೆ ಕರೆತರಲಾಗುತ್ತದೆ.</p>.<h2> ಜಟ್ಟಿ ಇಲ್ಲದೆ ತೊಂದರೆ </h2><p>‘ಕೂರ್ಮಗಡ ದ್ವೀಪದಲ್ಲಿ ದೋಣಿಗಳ ಸುರಕ್ಷಿತ ನಿಲುಗಡೆಗೆ ಶಾಶ್ವತ ಜಟ್ಟಿ ಕಲ್ಪಿಸದ ಕಾರಣದಿಂದ ಜಾತ್ರೆ ವೇಳೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಟ್ರಾಲರ್ ಪರ್ಸಿನ್ ದೋಣಿಗಳಲ್ಲಿ ಬಂದರೂ ಆ ದೋಣಿಯನ್ನು ದ್ವೀಪದಿಂದ ದೂರದಲ್ಲೇ ಇಳಿದು ಡಿಂಗಿ (ಸಣ್ಣ ದೋಣಿ) ಏರಿ ಬರಬೇಕು. ಇದರಿಂದ ಮಹಿಳೆಯರು ಅಶಕ್ತರಿಗೆ ಸಮಸ್ಯೆಯಾಗುತ್ತಿದೆ’ ಎಂದು ಭಕ್ತರು ದೂರಿದರು. ಕೂರ್ಮಗಡ ದ್ವೀಪದಲ್ಲಿ ಜಟ್ಟಿ ನಿರ್ಮಿಸಲು ಸಾಗರಮಾಲಾ ಯೋಜನೆಯಡಿ ಈ ಹಿಂದೆ ಅನುದಾನ ಮಂಜೂರಾಗಿದ್ದರೂ ಈವರೆಗೆ ಜಟ್ಟಿ ನಿರ್ಮಾಣ ಕೆಲಸ ನಡೆದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಬಂದಿದ್ದರಿಂದ ಸಮುದ್ರದ ಮಾರ್ಗದುದ್ದಕ್ಕೂ ಕರಾವಳಿ ಕಾವಲು ಪಡೆ ಕಸ್ಟಮ್ ಇಲಾಖೆಯ ದೋಣಿಗಳ ಮೂಲಕ ಗಸ್ತು ತಿರುಗುತ್ತ ಪೊಲೀಸರು ನಿಗಾ ಇಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>