‘ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸಮೀಕ್ಷೆ ಮಾಡಿ ನೀಡಿರುವ ಕಂಬಗಳಿಗೆ ಎಲ್.ಇ.ಡಿ ದೀಪ ಅಳವಡಿಸಲಾಗುತ್ತದೆ. ಒಂದೊಮ್ಮೆ ಎಲ್.ಇ.ಡಿ ದೀಪ ಕೆಟ್ಟು ಹೋದಲ್ಲಿ ಸಾರ್ವಜನಿಕರು ದೂರು ನೀಡಬೇಕಾದ ಅಗತ್ಯ ಇಲ್ಲ. ಜಿ.ಪಿ.ಎಸ್ ಅಳವಡಿಸಿದ ಸಿ.ಸಿ.ಎಂ.ಎಸ್ ಕಂಟ್ರೋಲ್ ರೂಂನಲ್ಲಿ ಸ್ವಯಂ ದೂರು ದಾಖಲಾಗುತ್ತದೆ. ಮೇಲ್ವಿಚಾರಕರು ಅದನ್ನು ಗಮನಿಸಿ ನಿರ್ದಿಷ್ಟ ಪ್ರದೇಶಕ್ಕೆ ವಾಹನವನ್ನು ಕಳುಹಿಸಿ ದುರಸ್ತಿ ಮಾಡುತ್ತಾರೆ. ವಿದ್ಯುತ್ ಉಳಿತಾಯ ಹಾಗೂ ನಿರ್ವಹಣೆಯಲ್ಲಿ ಲೋಪ ಉಂಟಾದಲ್ಲಿ ಕಂಪನಿಗೆ ಪುರಸಭೆಯಿಂದ ಬಿಲ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಸಮೃದ್ದಿ ಟೆಕ್ ಸೊಲ್ಯೂಷನ್ ಕಂಪೆನಿಯ ಎಂಜಿನಿಯರ್ ರಮೇಶ ಸಾಂಬಾಜೀ ‘ಪ್ರಜಾವಣಿ’ಗೆ ಪ್ರತಿಕ್ರಿಯಿಸಿದರು.