ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತೃಭೂಮಿ ಪ್ರತಿಷ್ಠಾನದ ಸ್ಥಾನಿಕ‌ ಸಮಿತಿ ರಚನೆ

Published 17 ಮೇ 2024, 16:22 IST
Last Updated 17 ಮೇ 2024, 16:22 IST
ಅಕ್ಷರ ಗಾತ್ರ

ಯಲ್ಲಾಪುರ : ಮಾತೃಭೂಮಿ ಸೇವಾ ಪ್ರತಿಷ್ಠಾನದ ಸ್ಥಾನಿಕ ಸಮಿತಿಯ ಪ್ರಧಾನ ಸಂಚಾಲಕರಾಗಿ ನಿವೃತ್ತ ವಲಯ ಅರಣ್ಯಾಧಿಕಾರಿ ಸುರೇಶ ಬೋರಕರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀರಂಗ ಕಟ್ಟಿಯವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಪ್ರತಿಷ್ಠಾನದ ಸ್ಥಾನಿಕ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಸಹ ಸಂಚಾಲಕರಾಗಿ ಸತೀಶ ಹೆಬ್ಬಾರ, ಕಾರ್ಯದರ್ಶಿಯಾಗಿ ಕೃಷ್ಣ ಭಟ್ಟ ನಾಯ್ಕನಕೆರೆ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ ಆಯ್ಕೆಯಾದರು.

ಡಿ.ಜಿ.ಹೆಗಡೆ, ಮಹೇಶ ಗೌಳಿ, ರಾಘವೇಂದ್ರ ಹೆಗಡೆ, ವೇಣುಗೋಪಾಲ ಗಾಂವ್ಕರ್, ಅಬ್ದುಲ್ ಖಾದರ ಶೇಖ್, ಪ್ರೇಮಾನಂದ ನಾಯ್ಕ, ಉಮೇಶ ಭಾಗ್ವತ್, ಅನಿತಾ ಹೆಗಡೆ, ಸುನಂದಾ ಪಾಟಣಕರ, ಜಯರಾಮ ಗುನಗಾ, ವಿಘ್ನೇಶ್ವರ ಗಾಂವ್ಕರ್, ನರಸಿಂಹ ಭಾಗ್ವತ್ ಮತ್ತು ಗಿರೀಶ ಶಂಕರ ಭಟ್ಟ ಇವರು ಸ್ಥಾನಿಕ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT