ತಕ್ಷಣ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ ಸಚಿವರು, ಆಗಸ್ಟ್ 6ರಂದು ಸಭೆ ನಡೆಸಿ, ಮಾತುಕತೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ವಿಶ್ವನಾಥ ಭಟ್ಟ, ರಾಜೇಂದ್ರಪ್ರಸಾದ ಭಟ್ಟ, ಮಂಗೇಶ ದೇಶಪಾಂಡೆ, ಕೆ.ಎನ್.ಹೆಗಡೆ, ಮಾರುತಿ ಓಂಕಾರ, ರಮೇಶ ಕಾಮತ, ಎಸ್.ಎಸ್. ಪಾಟೀಲ್, ನಾಗಪ್ಪ ಕಡಗಿ, ನಾಗೇಶ ಭಾಗ್ವತ್, ಗಿರೀಶ್ ಭಾಗ್ವತ್ ಇದ್ದರು.