ಹೆಚ್ಚಾಗಿ ಹೊಟೆಲ್ ಗಳಲ್ಲಿ ಸಲಾಡ್ ಗಾಗಿ ಬಳಕೆಯಾಗುವ ಈ ಸಿಹಿ ಈರುಳ್ಳಿಯನ್ನು ಕೇರಳ, ಗೋವಾ, ಮಹಾರಾಷ್ಟ್ರಗಳಿಗೆ ಸಗಟಾಗಿ ಮಾರಾಟ ಮಾಡಲಾಗುತ್ತಿತ್ತು. ಐದಾರು ವರ್ಷಗಳ ಹಿಂದೆ ಅಂಟಿದ ಹಾವು ಸುಳಿ ರೋಗ ಈರುಳ್ಳಿ ಬೆಳೆ ನಾಶಕ್ಕೆ ಕಾರಣವಾಗಿದೆ. ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಂಶೋಧನೆ ನಡೆಸಿ ಉಪಚಾರ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ರೋಗದ ಕಾರಣದಿಂದಾಗಿ ಒಂದು ಎಕರೆಗೆ 40 ಕ್ವಿಂಟಾಲ್ ಇಳುವರಿ ಪಡೆಯುವ ರೈತರು ಈಗ ಎರಡು, ಮೂರು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ.