‘ರಸ್ತೆಯಿಂದ ದೂರ ಒಳ ಭಾಗದಲ್ಲಿರುವ ನಮ್ಮ ನಾಲ್ಕಾರು ಮನೆಗಳಿಗೆ ಬೇರೆಯವರ ಮನೆಯ ತೋಟದ ಕಾಲು ದಾರಿಯ ಮೂಲಕ ಹೋಗಬೇಕಿದೆ. ರಸ್ತೆಯಂಚಿನ ಜಾಗದವರು ಪೈಪ್ಲೈನ್ ಅಳವಡಿಸಲು ತಕರಾರು ಮಾಡಿದ್ದರಿಂದ ನಮಗೆ ಕುಡಿಯುವ ನೀರಿನ ಸಂಪರ್ಕ ಸಿಗುತ್ತಿಲ್ಲ. ಬೇಸಿಗೆಯಲ್ಲಿ ಈ ಭಾಗದಲ್ಲಿ ಬಾವಿಯ ನೀರು ಸವಳಾಗುತ್ತದೆ, ಮಳೆಗಾಲದಲ್ಲಿ ನೆರೆ ನೀರು ನುಗ್ಗಿ ಕೆಸರುಮಯವಾಗುತ್ತದೆ. ಇಂತ ಸಂದರ್ಭದಲ್ಲಿ ಎತ್ತರದ ಪ್ರದೇಶದಲ್ಲಿರುವ ಬೇರೆಯವರ ಮನೆಯ ಬಾವಿಗಳಿಂದ ಕುಡಿಯುವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಬೊಗರಿಬೈಲ ಗ್ರಾಮದ ನಿವಾಸಿ ಶಂಕರ ನಾಯ್ಕ.