‘ಹೆಗ್ಗಾರ–ಮಾಗೋಡ–ನಗರಬಸ್ತಿಕೇರಿ ರಸ್ತೆ ಊರಿಗೆ ಹೊರ ಜಗತ್ತಿನ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಅಲ್ಲಿಂದ ಕುಮಾರ ರಾಮ ಮತ್ತು ಮಹಾಸತಿಯರ ದೇವಸ್ಥಾನಕ್ಕೆ ಈಚಿನ ವರ್ಷಗಳಲ್ಲಿ ರಸ್ತೆಯೊಂದು ನಿರ್ಮಾಣವಾಗಿದೆ. ದೇವಸ್ಥಾನಕ್ಕೆ ರಸ್ತೆಯಾಗಿರುವುದರಿಂದ ಹೊರಗಿನ ಭಕ್ತರಿಗೆ ಇಲ್ಲಿಗೆ ಬರಲು ಅನುಕೂಲವಾಗಿದೆ. ಆದರೆ, ಇರುವ ರಸ್ತೆಗಳೆಲ್ಲ ಊರಿನ ಹೊರವಲಯದಲ್ಲಿ ಇವೆ. ಊರಿನ ಒಳಗೆ ಬರಬೇಕೆಂದರೆ ಕಾಲ್ನಡಿಗೆಯೇ ಗತಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಂತ ನಾಯ್ಕ ಹೆಗ್ಗಾರ.