ಕಾರವಾರ: ಹುಬ್ಬಳ್ಳಿ— ಅಂಕೋಲಾ ರೈಲ್ವೇ ಯೋಜನೆಯ ಬಗ್ಗೆ ರೈಲ್ವೆ ಬಳಕೆದಾರರು ಮತ್ತು ಕೇಂದ್ರದ ತಂಡದ ನಡುವಿನ ಸಭೆಯು, ಆರಂಭದಲ್ಲೇ ಆಕ್ಷೇಪಕ್ಕೆ ಸಾಕ್ಷಿಯಾಯಿತು. ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮತ್ತು ಬೆಂಬಲಿಗರು, ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಗೆ ಆಯೋಜಿಸಬೇಕು ಎಂದು ಆಗ್ರಹಿಸಿದರು. ಗದ್ದಲದ ನಡುವೆ ಸಭೆಯನ್ನು 15 ನಿಮಿಷ ಮುಂದೂಡಲಾಯಿತು.