<p><strong>ಕಾರವಾರ</strong>: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ 2023–24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು ₹44,34,77,748 ಮೊತ್ತದ ಬೆಳೆವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.</p>.<p>‘ಪ್ರಕೃತಿ ವಿಕೋಪಗಳಿಂದ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಪಾಲಿನ ನೆರವಿನ ಈ ಯೋಜನೆಯಡಿ, ವಿಮೆ ಪಡೆದಿದ್ದ ಜಿಲ್ಲೆಯ ರೈತರ ಖಾತೆಗೆ ನೇರವಾಗಿ ವಿಮೆ ಮೊತ್ತ ಪಾವತಿಯಾಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಭಟ್ಕಳ ತಾಲ್ಲೂಕಿನ 271 ರೈತರಿಗೆ ₹1.54 ಲಕ್ಷ, ದಾಂಡೇಲಿಯ 103 ರೈತರಿಗೆ ₹4.63 ಲಕ್ಷ, ಹಳಿಯಾಳದ 8,883 ರೈತರಿಗೆ ₹5.35 ಕೋಟಿ, ಹೊನ್ನಾವರದ 84 ರೈತರಿಗೆ ₹36 ಸಾವಿರ, ಜೋಯಿಡಾದ 275 ರೈತರಿಗೆ ₹1.29 ಲಕ್ಷ, ಕುಮಟಾದ 57 ರೈತರಿಗೆ ₹50 ಸಾವಿರ, ಮುಂಡಗೋಡದ 7,041 ರೈತರಿಗೆ ₹20.28 ಕೋಟಿ, ಸಿದ್ದಾಪುರದ 421 ರೈತರಿಗೆ ₹3.59 ಲಕ್ಷ, ಶಿರಸಿಯ 9,123 ರೈತರಿಗೆ ₹17.72 ಕೋಟಿ, ಯಲ್ಲಾಪುರದ 1,379 ರೈತರಿಗೆ ₹86.32 ಲಕ್ಷ ಜಮಾ ಆಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ 2023–24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು ₹44,34,77,748 ಮೊತ್ತದ ಬೆಳೆವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.</p>.<p>‘ಪ್ರಕೃತಿ ವಿಕೋಪಗಳಿಂದ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಪಾಲಿನ ನೆರವಿನ ಈ ಯೋಜನೆಯಡಿ, ವಿಮೆ ಪಡೆದಿದ್ದ ಜಿಲ್ಲೆಯ ರೈತರ ಖಾತೆಗೆ ನೇರವಾಗಿ ವಿಮೆ ಮೊತ್ತ ಪಾವತಿಯಾಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಭಟ್ಕಳ ತಾಲ್ಲೂಕಿನ 271 ರೈತರಿಗೆ ₹1.54 ಲಕ್ಷ, ದಾಂಡೇಲಿಯ 103 ರೈತರಿಗೆ ₹4.63 ಲಕ್ಷ, ಹಳಿಯಾಳದ 8,883 ರೈತರಿಗೆ ₹5.35 ಕೋಟಿ, ಹೊನ್ನಾವರದ 84 ರೈತರಿಗೆ ₹36 ಸಾವಿರ, ಜೋಯಿಡಾದ 275 ರೈತರಿಗೆ ₹1.29 ಲಕ್ಷ, ಕುಮಟಾದ 57 ರೈತರಿಗೆ ₹50 ಸಾವಿರ, ಮುಂಡಗೋಡದ 7,041 ರೈತರಿಗೆ ₹20.28 ಕೋಟಿ, ಸಿದ್ದಾಪುರದ 421 ರೈತರಿಗೆ ₹3.59 ಲಕ್ಷ, ಶಿರಸಿಯ 9,123 ರೈತರಿಗೆ ₹17.72 ಕೋಟಿ, ಯಲ್ಲಾಪುರದ 1,379 ರೈತರಿಗೆ ₹86.32 ಲಕ್ಷ ಜಮಾ ಆಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>