<p><strong>ಶಿರಸಿ:</strong> ‘ಸಾಗರಮಾಲಾ ಯೋಜನೆ’ಯಡಿ ಕೈಗೆತ್ತಿಕೊಂಡಿರುವ ಹಾವೇರಿ–ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಕಾಮಗಾರಿ ನಿಗದಿತ ಅವಧಿ ಮೀರಿದರೂ ಇನ್ನೂ ಮುಗಿದಿಲ್ಲ. ರಸ್ತೆ ಹದಗೆಟ್ಟಿದ್ದು, ಉತ್ತರ ಕರ್ನಾಟಕದೊಂದಿಗೆ ಮಲೆನಾಡು ಸಂಪರ್ಕ ಕಷ್ಟವಾಗಿದೆ.</p><p>ಶಿರಸಿಯಿಂದ ಬೇಲೆಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯಡಿ ಮೊದಲ ಹಂತದಲ್ಲಿ ಶಿರಸಿಯಿಂದ ಕುಮಟಾ ತಾಲ್ಲೂಕಿನ ದೀವಗಿವರೆಗೆ ರಸ್ತೆ ನಿರ್ಮಿಸುವ ಕೆಲಸ 2020ರಲ್ಲಿ ಆರಂಭಗೊಂಡಿತ್ತು. 2023ರಲ್ಲಿಯೇ ಮುಗಿಯಬೇಕಿತ್ತು. ಇನ್ನೂ ಮುಗಿದಿಲ್ಲ.</p><p>ಈ ರಸ್ತೆಯು ನೀಲೆಕಣಿ ಬಳಿ ಸಂಪೂರ್ಣ ಹಾಳಾಗಿದೆ. ದುಸ್ಥಿತಿಯ ಚಿತ್ರ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ರಸ್ತೆಯ ಕಾಮಗಾರಿ ನಿರ್ವಹಣೆ ಗುತ್ತಿಗೆ ಪಡೆದಿದ್ದ ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. </p><p>ನಗರದ ಮೂಲಕ ಹಾದುಹೋಗುವ ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿ ಯೋಜನೆಯ ಎರಡನೇ ಹಂತದಲ್ಲಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬೇಕಿದೆ. ಆದರೆ, ಇನ್ನೂ ಕೆಲಸವೇ ಆರಂಭಗೊಂಡಿಲ್ಲ. ಅಮ್ಮಾಪುರ ಇನ್ಫ್ರಾಸ್ಟ್ರಕ್ಚರ್ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದಿದೆ.</p><p>‘ಶಿರಸಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಗುಂಡಿಗಳಿವೆ. ಶಿರಸಿ–ಹಾವೇರಿ ನಡುವೆ ವಾಹನ ಸಂಚಾರ ಹೆಚ್ಚಿದೆ. ಸರಕು ಸಾಗಣೆ ವಾಹನ ಸವಾರರು ಇಲ್ಲಿ ಸಾಗಲು ಹಿಂಜರಿಕೆ ಇದೆ. ದುರಸ್ತಿಗೆ ನಿರ್ಲಕ್ಷ್ಯ ತೋರಲಾಗಿದೆ’ ಎಂದು ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ‘ಸಾಗರಮಾಲಾ ಯೋಜನೆ’ಯಡಿ ಕೈಗೆತ್ತಿಕೊಂಡಿರುವ ಹಾವೇರಿ–ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಕಾಮಗಾರಿ ನಿಗದಿತ ಅವಧಿ ಮೀರಿದರೂ ಇನ್ನೂ ಮುಗಿದಿಲ್ಲ. ರಸ್ತೆ ಹದಗೆಟ್ಟಿದ್ದು, ಉತ್ತರ ಕರ್ನಾಟಕದೊಂದಿಗೆ ಮಲೆನಾಡು ಸಂಪರ್ಕ ಕಷ್ಟವಾಗಿದೆ.</p><p>ಶಿರಸಿಯಿಂದ ಬೇಲೆಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯಡಿ ಮೊದಲ ಹಂತದಲ್ಲಿ ಶಿರಸಿಯಿಂದ ಕುಮಟಾ ತಾಲ್ಲೂಕಿನ ದೀವಗಿವರೆಗೆ ರಸ್ತೆ ನಿರ್ಮಿಸುವ ಕೆಲಸ 2020ರಲ್ಲಿ ಆರಂಭಗೊಂಡಿತ್ತು. 2023ರಲ್ಲಿಯೇ ಮುಗಿಯಬೇಕಿತ್ತು. ಇನ್ನೂ ಮುಗಿದಿಲ್ಲ.</p><p>ಈ ರಸ್ತೆಯು ನೀಲೆಕಣಿ ಬಳಿ ಸಂಪೂರ್ಣ ಹಾಳಾಗಿದೆ. ದುಸ್ಥಿತಿಯ ಚಿತ್ರ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ರಸ್ತೆಯ ಕಾಮಗಾರಿ ನಿರ್ವಹಣೆ ಗುತ್ತಿಗೆ ಪಡೆದಿದ್ದ ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. </p><p>ನಗರದ ಮೂಲಕ ಹಾದುಹೋಗುವ ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿ ಯೋಜನೆಯ ಎರಡನೇ ಹಂತದಲ್ಲಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬೇಕಿದೆ. ಆದರೆ, ಇನ್ನೂ ಕೆಲಸವೇ ಆರಂಭಗೊಂಡಿಲ್ಲ. ಅಮ್ಮಾಪುರ ಇನ್ಫ್ರಾಸ್ಟ್ರಕ್ಚರ್ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದಿದೆ.</p><p>‘ಶಿರಸಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಗುಂಡಿಗಳಿವೆ. ಶಿರಸಿ–ಹಾವೇರಿ ನಡುವೆ ವಾಹನ ಸಂಚಾರ ಹೆಚ್ಚಿದೆ. ಸರಕು ಸಾಗಣೆ ವಾಹನ ಸವಾರರು ಇಲ್ಲಿ ಸಾಗಲು ಹಿಂಜರಿಕೆ ಇದೆ. ದುರಸ್ತಿಗೆ ನಿರ್ಲಕ್ಷ್ಯ ತೋರಲಾಗಿದೆ’ ಎಂದು ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>